ಬಾವಿಗೆ ಬಿದ್ದು ಮೃತ್ಯು

Update: 2018-12-03 16:36 GMT

ಕೋಟ, ಡಿ.3: ನೀರು ಸೇದುವ ಸಂದರ್ಭ ಅಕಸ್ಮಿಕವಾಗಿ ಬಾವಿಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಡಿ.3ರಂದು ಬೆಳಗ್ಗೆ  ಕೆದೂರು ಗ್ರಾಮದ ಬಡಾಬೆಟ್ಟು ಎಂಬಲ್ಲಿ ನಡೆದಿದೆ.

ಮೃತರನ್ನು ಬಡಾಬೆಟ್ಟು ನಿವಾಸಿ ಜಯರಾಮ ಶೆಟ್ಟಿ(70) ಎಂದು ಗುರುತಿಸ ಲಾಗಿದೆ.

ಕೃಷಿಕರಾಗಿರುವ ಇವರು ಮನೆಯ ತೋಟದಲ್ಲಿರುವ ಆವರಣ ಇಲ್ಲದ ಬಾವಿಯಿಂದ ನೀರು ಸೇದುವಾಗ ಅಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News