ಡಿ. 7: ತುಂಬೆಯಲ್ಲಿ ಮದೀನಾ ಪ್ಯಾಶನ್ ಕಾರ್ಯಕ್ರಮ

Update: 2018-12-04 07:50 GMT

ಮಂಗಳೂರು, ಡಿ. 4: ಪ್ರವಾದಿ( ಸ ಅ) ಅನುಪಮ ವ್ಯಕ್ತಿತ್ವ ವೆಂಬ ವಾಕ್ಯದಡಿ ಎಸ್ಕೆಎಸ್ಸೆಸ್ಸೆಫ್ ದ.ಕ.ಜಿಲ್ಲಾ ಸಮಿತಿಯು ಡಿ.7ರಂದು ಸಂಜೆ 4 ಗಂಟೆಗೆ ಮುಹಿಯುದ್ದೀನ್ ಜುಮಾ ಮಸೀದಿ ಮುಂಭಾಗ ಬಿ.ಎ. ಮೈದಾನ ತುಂಬೆಯಲ್ಲಿ ಮದೀನಾ ಪ್ಯಾಶನ್ ಕಾರ್ಯಕ್ರಮ ಆಯೋಜಿಸಿದೆ.

ಗ್ರಾಂಡ್ ಮೌಲೀದ್ ಮಜ್ಲಿಸ್, ಬುರ್ದಾ ಮಜ್ಲಿಸ್ ಹುಬ್ಬುರ್ರಸೂಲ್ ಪ್ರಭಾಷಣ ನಡೆಯಲಿದೆ. ಸಮಾರಂಭ ಅಧ್ಯಕ್ಷತೆಯನ್ನು ಜಿಲ್ಲಾಧ್ಶಕ್ಷ ಖಾಸಿಂ ದಾರಿಮಿ ಕಿನ್ಯ ವಹಿಸಲ್ಲಿದ್ದು ಜಿಲ್ಲಾ ಕೋಶಾಧಿಕಾರಿ ಸೈಯದ್ ಅಮೀರ್ ತಂಙಳ್ ಕಿನ್ಶ ಮೌಲೀದ್ ಮಜ್ಲಿಸ್ ಗೆ ನೇತೃತ್ವ ನೀಡಲ್ಲಿದ್ದಾರೆ.

ಎಸ್ಕೆಎಸ್ಸೆಸ್ಸೆಫ್ ಕೇಂದ್ರ ಸಮಿತಿಯ ಕೋಶಾಧಿಕಾರಿ ಹಬೀಬ್ ಪೈಝಿ ಕೊಟಪ್ಪಡಂ ಮಾತನಾಡಲಿದ್ದಾರೆ ಎಂದು ಎಸ್ಕೆಎಸ್ಸೆಸ್ಸೆಫ್ ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ ತಿಂಗಳಾಡಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News