×
Ad

ಹೆಗ್ಗೊಡಿನ ಪ್ರಸನ್ನ, ಬಿ.ಎಂ.ಹನೀಫ್, ಮಂಜಮ್ಮ ಜೋಗತಿ, ವಂ. ಬ್ರಿಟ್ಟೋ ಪ್ರಭು ಬಿ.ಎಂ.ರೋಹಿಣಿಯವರಿಗೆ ಪ್ರಶಸ್ತಿ

Update: 2018-12-04 21:09 IST

ಮಂಗಳೂರು, ಡಿ.4: ಸಂದೇಶ ಪ್ರತಿಷ್ಠಾನದ 2019ನೆ ಸಾಲಿನ ಸಂದೇಶ ಸಾಹಿತ್ಯ ಪ್ರಶಸ್ತಿಯನ್ನು ಶಿವಮೊಗ್ಗದ ಹೆಗ್ಗೋಡಿನ ರಂಗ ಕರ್ಮಿ ಪ್ರಸನ್ನ ಹೆಗ್ಗೋಡ್, ಸಂದೇಶ ಕಲಾ ಪ್ರಶಸ್ತಿಯನ್ನು ಬಳ್ಳಾರಿಯ ಮಂಜಮ್ಮ ಜೋಗತಿ, ಸಂದೇಶ ಮಾಧ್ಯಮ ಪ್ರಶಸ್ತಿ ಬಿ.ಎಂ.ಹನೀಫ್ , ಸಂದೇಶ ಶಿಕ್ಷಣ ಪ್ರಶಸ್ತಿ ಬಿ.ಎಂ.ರೋಹಿಣಿ ಕೊಂಕಣಿ ಸಂಗೀತಾ ಪ್ರಶಸ್ತಿಯನ್ನು ವಂ.ಬೆನ್ ಬ್ರಿಟ್ಟೋ ಪ್ರಭು ಹಾಗೂ ಸಂದೇಶ ಪ್ರತಿಷ್ಠಾನದ ಸಂದೇಶ ವಿಶೇಷ ಪ್ರಶಸ್ತಿಯನ್ನು ಸ್ನೇಹ ಸದನ್‌ಮತ್ತು ಜೀವದಾನ್ ಹೆಚ್‌ಐವಿ, ಏಡ್ಸ್ ಸೇವಾ ಮತ್ತು ಪುನರ್‌ವಸತಿ ಕೇಂದ್ರ ಗುರುಪುರ ಇವರಿಗೆ ನೀಡಲಾಗುವುದು ಎಂದು ಸಂದೇಶ  ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ ನಾ.ಡಿ.ಸೋಜ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಪ್ರಶಸ್ತಿ ಪುರಸ್ಕೃತರಿಗೆ 25 ಸಾವಿರ ನಗದು ಪುರಸ್ಕಾರದೊಂದಿಗೆ ಸನ್ಮಾನಿಸಲಾಗುವುದು. ಜ. 22ರಂದು ಸಂಜೆ 5.30 ಗಂಟೆಗೆ ಸಂದೇಶ ಸಂಸ್ಥೆಯ ಹೋರಾಂಗಣದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ. ಬಳ್ಳಾರಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ.ವಂ.ಹೆನ್ರಿ ಡಿ ಸೋಜ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಮುಖ್ಯ ಅತಿಥಿಗಳಾಗಿ,ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಅತಿ.ವಂ.ಪೀಟರ್ ಪಾವ್ಲ್ ಸಲ್ದಾನಾ ಮತ್ತು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ.ವಂ.ಜೆರಾಲ್ಡ್ ಐಸಾಕ್ ಲೋಬೋರವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಂದೇಶ ಸಂಸ್ಥೆಯ ನಿರ್ದೇಶಕ ವಂ.ನೆಲ್ಸ್‌ನ್ ಆಲ್ಮೇಡಾ ತಿಳಿಸಿದ್ದಾರೆ.

ಭಿಕ್ಷೆ ಬೇಡಿ ಕಲಾವಿದೆಯಾದ ಮಂಜಮ್ಮ ಜೋಗತಿ 2019ರ ಸಂದೇಶ ಕಲಾ ಪ್ರಶಸ್ತಿ

ಬಳ್ಳಾರಿ ಜಿಲ್ಲೆಯ ಕಂಪ್ಲಿ ಯ ಹೊಸಪೇಟೆ ತಾಲೂಕಿನ ಗೊಲ್ಲರ ಹಳ್ಳಿಯ ಮಂಜಮ್ಮ ಜೋಗತಿ ಭಿಕ್ಷೆ ಬೇಡುತ್ತಲೆ ಜೋಗತಿ ನೃತ್ಯವನ್ನು ಕಲಿತವರು.ಬಹಳ ಶ್ರಮ ಮತ್ತು ಶ್ರದ್ಧೆಯಿಂದ ಕಲಿತ ಕಲೆಯ ಮೂಲಕ ಮಂಜಮ್ಮ ದೊಡ್ಡ ಕಲಾವಿದೆಯಾಗಿ ಕರ್ನಾಟಕ ಜಾಣಪದ ಅಕಾಡೆಮಿಯ ಸದಸ್ಯೆಯಾಗಿ ಮನ್ನಣೆ ಪಡೆದಿದ್ದಾರೆ.

ನಾಡಿನ ಉದ್ದಗಲಕ್ಕೂ ನಾಟಕ ಹಾಗೂ ಜೋಗತಿ ನೃತ್ಯ ಪ್ರದರ್ಶನ ನೀಡಿ ಹಲವಾರು ಪ್ರತಿಷ್ಠಿತ ಗೌರವ ಪುರಸ್ಕಾರಗಳನ್ನು ಪಡೆದಿದ್ದಾರೆ. 2010ರಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ ಎಂದು ನೆಲ್ಸನ್ ಆಲ್ಮೇಡಾ ತಿಳಿಸಿದ್ದಾರೆ.

ಸಂದೇಶ ವಿಶೇಷ ಪ್ರಶಸ್ತಿ 

ಸಂದೇಶ ಪ್ರತಿಷ್ಠಾನದಮೂಲಕ ನೇರವಾಗಿ ನೀಡಲಾಗುವ ವಿಶೇಷ ಪ್ರಶಸ್ತಿಯನ್ನು ಸ್ನೇಹ ಸದನ್ ಮತ್ತು ಜೀವದಾನ್ ಸಂಸ್ಥೆಗಳಿಗೆ ನೀಡಲಾಗಿದೆ. ವಂ.ಟಿ.ಜಿ.ಥೋಮಸ್ ಎಮ್ .ಐ ಯವರಿಂದ ಸ್ಥಾಪನೆಯಾದ ಸಂಸ್ಥೆ,ಹೆಣ್ಣು ಮಕ್ಕಳಿಗೆ ಮತ್ತು ಮಹಿಳೆಯರಿಗೆ ಸೇವೆ ಮತ್ತು ಪುನರ್ವಸತಿ ನೀಡಿದೆ.

ಎರಡೂ ಸಂಸ್ಥೆಗಳು 4,500ಕ್ಕೂ ಹೆಚ್ಚು ಎಚ್‌ಐವಿ ಮತ್ತು ಏಡ್ಸ್ ರೋಗಿಗಳಿಗೆ ಚಿಕಿತ್ಸೆ ನೀಡಿದೆ. ಪ್ರಸ್ತುತ 38ಗಂಡು ಮಕ್ಕಳು,10 ಗಂಡಸರು, 20 ಮಕ್ಕಳು, 27 ಹೆಣ್ಣು ಮಕ್ಕಳು, 25 ಸ್ತ್ರೀಯರು ಹಾಗೂ ರಾಜ್ಯ ಹಾಗೂ ಹೊರ ರಾಜ್ಯದಿಂದ ಎಚ್.ಐ.ವಿ,ಏಡ್ಸ್ ರೋಗಿಗಳಿಗೆ ಚಿಕಿತ್ಸೆ ನೀಡಿರುತ್ತರುವ ಸಂಸ್ಥೆಯಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News