ಡಾ.ಅಂಬೇಡ್ಕರ್ ಅವರ ಪುಣ್ಯತಿಥಿಯಂದು ಸಾವಿರಾರು ಜನರಿಂದ ಗೌರವಾರ್ಪಣೆ

Update: 2018-12-06 17:37 GMT

ಮುಂಬೈ,ಡಿ.6: ಡಾ.ಬಿ.ಆರ್.ಅಂಬೇಡ್ಕರ್ ಅವರ 62ನೇ ಪುಣ್ಯತಿಥಿಯಾದ ಗುರುವಾರ ಇಲ್ಲಿ ಸಾವಿರಾರು ಜನರು ಅವರಿಗೆ ಗೌರವಾರ್ಪಣೆಯನ್ನು ಮಾಡಿದರು.

ಬೆಳಿಗ್ಗೆಯಿಂದಲೇ ಮಧ್ಯಮುಂಬೈನ ‘ಚೈತನ್ಯಭೂಮಿ’ಗೆ ತೆರಳುವ ಎಲ್ಲ ರಸ್ತೆಗಳಲ್ಲಿ ಅಂಬೇಡ್ಕರ್ ಅನುಯಾಯಿಗಳ ಭಾರೀ ದಟ್ಟಣೆಯಿತ್ತು. ‘ಮಹಾಪರಿನಿರ್ವಾಣ ದಿನ’ದಂದು ಅಂಬೇಡ್ಕರ್ ಅವರಿಗೆ ಗೌರವಗಳನ್ನು ಸಲ್ಲಿಸಲು ಕಳೆದ ಮೂರುದಿನಗಳಿಂದಲೂ ಜನರು ಮುಂಬೈನಲ್ಲಿ ಸಮಾವೇಶಗೊಳ್ಳುತ್ತಿದ್ದರು. ಅಂಬೇಡ್ಕರ್ ಅವರು ಸ್ಥಾಪಿಸಿದ್ದ ಸಮತಾ ಸೈನಿಕ ದಳದ ಸ್ವಯಂಸೇವಕರು ಜನರ ದಟ್ಟಣೆಯನ್ನು ನಿಯಂತ್ರಿಸುತ್ತಿದ್ದರು. ನಗರದ ಪೊಲೀಸರು ಕಟ್ಟೆಚ್ಚರ ವಹಿಸಿದ್ದು,ಜನರ ಅನುಕೂಲಕ್ಕಾಗಿ ಕೆಲವು ರಸ್ತೆಗಳಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಿದ್ದರು. ಜನರ ದಟ್ಟಣೆಯನ್ನು ನಿಭಾಯಿಸಲು ಬೃಹನ್ಮುಂಬೈ ಮಹಾನಗರ ಪಾಲಿಕೆಯೂ ವ್ಯಾಪಕ ವ್ಯವಸ್ಥೆಗಳನ್ನು ಕೈಗೊಂಡಿದೆ.

ಕೆಲವು ರಸ್ತೆಗಳಲ್ಲಿ ಶುಕ್ರವಾರ ಮಧ್ಯರಾತ್ರಿಯವರೆಗೂ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದ್ದು,ಚೈತನ್ಯಭೂಮಿಗೆ ತೆರಳುವ ಕೆಲವು ರಸ್ತೆಗಳನ್ನು ಮುಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News