ಉಡುಪಿ: ಡಿ.8 ರಿಂದ ವಿಮಾ ನೌಕರರ 60ನೇ ವಿಭಾಗೀಯ ಸಮ್ಮೇಳನ

Update: 2018-12-07 17:12 GMT

ಉಡುಪಿ, ಡಿ.7: ವಿಮಾ ನೌಕರರ ಸಂಘ ಉಡುಪಿ ವಿಭಾಗದ 60ನೇ ವಿಭಾಗೀಯ ಸಮ್ಮೇಳನ ಹಾಗೂ 19ನೇ ಮಹಿಳಾ ಸಮಾವೇಶ ಡಿ.8 ಮತ್ತು 9ರಂದು ಬ್ರಹ್ಮಗಿರಿಯಲ್ಲಿರುವ ಲಯನ್ಸ್ ಭವನದಲ್ಲಿ ನಡೆಯಲಿದೆ.

ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಡಿ. 8ರ ಶನಿವಾರ ಬೆಳಗ್ಗೆ 09:30ಕ್ಕೆ ನಡೆಯಲಿದೆ. ಸಮ್ಮೇಳನವನ್ನು ಹೈದರಾಬಾದ್‌ನ ದಕ್ಷಿಣ ಮಧ್ಯ ವಲಯ ವಿಮಾ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕ್ಲೆಮೆಂಟ್ ಕ್ಸೇವಿಯರ್ ದಾಸ್ ಉದ್ಘಾಟಿಸುವರು. ಮುಖ್ಯ ಅತಿಥಿಯಾಗಿ ದಕ್ಷಿಣ ಮಧ್ಯ ವಲಯ ವಿಮಾ ನೌಕರರ ಒಕ್ಕೂಟದ ಉಪಾಧ್ಯಕ್ಷ ಮುಹಮ್ಮದ್ ಮೆಹಬೂಬ್ ಮತ್ತು ದಕ್ಷಿಣ ಮಧ್ಯ ವಲಯ ವಿಮಾ ನೌಕರರ ಒಕ್ಕೂಟದ ಮಹಿಳಾ ಉಪಸಮಿತಿಯ ಕರ್ನಾಟಕ ವಿಭಾಗಗಳ ಉಪಸಂಚಾಲಕಿ ಎಚ್ . ಆರ್. ಗಾಯತ್ರಿ ಭಾಗವಹಿಸಲಿದ್ದಾರೆ.

ಉಡುಪಿ, ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಯ ಜೀವವಿಮಾ ಕಛೇರಿಗಳಿಂದ ಸುಮಾರು 150ರಿಂದ 200 ನೌಕರರು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದು ಎಲ್‌ಐಸಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News