ಸಿದ್ಧಗಂಗಾ ಮಠದ ಸ್ವಾಮೀಜಿಗಳಿಗೆ ಚಿಕಿತ್ಸೆ ನೀಡಲಿರುವ ಡಾ.ಮುಹಮ್ಮದ್ ರೆಲಾ

Update: 2018-12-07 17:42 GMT

ಬೆಂಗಳೂರು, ಡಿ.7: ಅನಾರೋಗ್ಯದಿಂದ ಬಳಲುತ್ತಿರುವ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳಿಗೆ ಪ್ರಸಿದ್ಧ ವೈದ್ಯ ಡಾ.ಮುಹಮ್ಮದ್ ರೆಲಾ ಚಿಕಿತ್ಸೆ ನೀಡಲಿದ್ದಾರೆ.

ಚೆನ್ನೈಯ ವೈದ್ಯರ ತಂಡವೊಂದು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ನಂತರ ಸ್ವಾಮೀಜಿಗಳನ್ನು ಚೆನ್ನೈಗೆ ವಿಮಾನದ ಮೂಲಕ ಕರೆದೊಯ್ಯಲು ನಿರ್ಧರಿಸಲಾಗಿದೆ. ಚೆನ್ನೈಯಲ್ಲಿರುವ ಡಾ.ರೆಲಾ ಇನ್ ಸ್ಟಿಟ್ಯೂಟ್ ಆ್ಯಂಡ್ ಮೆಡಿಕಲ್ ಸೆಂಟರ್ ಗೆ ದಾಖಲಿಸಲಾಗುವುದು.

ಮುಹಮ್ಮದ್ ರೆಲಾ ಅವರು ಈ ಹಿಂದೆ ಬೆಂಗಳೂರಿನಲ್ಲಿ ಕೆಲಸ ಮಾಡಿದ್ದರು ಹಾಗು 2 ವರ್ಷಗಳ ಹಿಂದೆ ಸ್ವಾಮೀಜಿಗಳಿಗೆ ಚಿಕಿತ್ಸೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News