ಹೆಬ್ರಿ: ಬಸ್ಸಿನಲ್ಲಿ ದನದ ಮಾಂಸ ಸಾಗಾಟ ಆರೋಪ; ಇಬ್ಬರ ಬಂಧನ, ಬಸ್ ವಶಕ್ಕೆ

Update: 2018-12-08 16:43 GMT

ಹೆಬ್ರಿ, ಡಿ.8: ಹೆಬ್ರಿ ಠಾಣಾಧಿಕಾರಿ ಮಹಾಬಲ ಶೆಟ್ಟಿ ನೇತೃತ್ವದ ಪೊಲೀಸ್ ತಂಡ ಖಚಿತ ಮಾಹಿತಿಯ ಮೇರೆಗೆ ಶುಕ್ರವಾರ ಶಿವಮೊಗ್ಗದಿಂದ ಹೆಬ್ರಿ ಮಾರ್ಗವಾಗಿ ಉಡುಪಿಗೆ ಹೋಗುತಿದ್ದ ಮಿನಿ ಬಸ್ಸಿನಲ್ಲಿ ಸಾಗಿಸುತಿದ್ದ ಸುಮಾರು 15 ಕೆಜಿಯಷ್ಟು ಮಾಂಸವನ್ನು ವಶಪಡಿಸಿಕೊಂಡಿದ್ದು, ಇದು ದನದ ಮಾಂಸ ಎಂಬ ಸಂಶಯದ ಮೇಲೆ ಇಬ್ಬರನ್ನು ಬಂಧಿಸಿ ಬಸ್‌ನ್ನು ವಶಪಡಿಸಿಕೊಂಡಿದ್ದಾರೆ.

ಮಿನಿ ಬಸ್ಸಿನಲ್ಲಿ ಉಡುಪಿಗೆ ಕೊಡಲೆಂದು ಬಸ್ ಚಾಲಕ ರಿಜ್ವಾನ್ ಬಳಿ ದೊಡ್ಡಕಟ್ಟಿನಲ್ಲಿ ಪಾರ್ಸೆಲೊಂದನ್ನು ನೀಡಿದ್ದರು. ಬಸ್ಸನ್ನು ಹೆಬ್ರಿ ಪೊಲೀಸರು ವಶಪಡಿಸಿಕೊಂಡಿದ್ದು ಚಾಲಕ ರಿಜ್ವಾನ್ ಮತ್ತು ನಿರ್ವಾಹಕ ದೀಪಕ್ ಎಂಬವನ್ನು ಬಂಧಿಸಿ ತನಿಖೆ ನಡೆಸುತಿದ್ದಾರೆ.

ವಶಪಡಿಸಿಕೊಂಡಿರುವುದು ದನದ ಮಾಂಸ ಎಂಬುದನ್ನು ಖಚಿತ ಪಡಿಸಿ ಕೊಳ್ಳಲು ಮಾಂಸವನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಹೆಬ್ರಿ ಪೊಲೀಸರು ತನಿಖೆ ನಡೆಸುತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News