×
Ad

ಮಂಗಳೂರಿನಲ್ಲಿ ಸಮಸ್ತ ಶರೀಅತ್ ಸಂರಕ್ಷಣಾ ಸಮ್ಮೇಳನ: ರ್ಯಾಲಿಗೆ ತ್ವಾಕ ಉಸ್ತಾದ್ ಚಾಲನೆ

Update: 2018-12-09 15:48 IST

ಮಂಗಳೂರು, ಡಿ.9: ಸಮಸ್ತ ಶರೀಅತ್ ಸಂರಕ್ಷಣಾ ಸಮಿತಿಯ ವತಿಯಿಂದ ‘ಸಂವಿಧಾನಾತ್ಮಕ ಹಕ್ಕುಗಳ ಸಂರಕ್ಷಣೆಗಾಗಿ ಕೈ ಜೋಡಿಸೋಣ’ ಎಂಬ ಘೋಷಣೆಯೊಂದಿಗೆ ಡಿ.9ರಂದು ನಗರದ ನೆಹರೂ ಮೈದಾನದಲ್ಲಿ ಶರೀಅತ್ ಸಂರಕ್ಷಣಾ ರ್ಯಾಲಿ ಮತ್ತು ಸಮ್ಮೇಳನಕ್ಕೆ ಚಾಲನೆ ನೀಡಲಾಯಿತು.

ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಿಂದ ರ್ಯಾಲಿ: ಸಮಸ್ತ ಶರೀಅತ್ ಸಂರಕ್ಷಣಾ ರ್ಯಾಲಿ ಆರಂಭಗೊಂಡಿದ್ದು, ದ.ಕ. ಜಿಲ್ಲಾ ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್ ಚಾಲನೆ ನೀಡಿದರು.

ಅಮೀರ್  ತಂಙಳ್ ಕಿನ್ಯ, ಅಬ್ದುಲ್ ಅಝೀಝ್ ದಾರಿಮಿ‌ ಚೊಕ್ಕಬೆಟ್ಟು, ಸ್ವದಕತುಲ್ಲಾ ಫೈಝಿ, ತಬೂಕ್ ದಾರಿಮಿ, ಎಸ್ ಬಿ ದಾರಿಮಿ, ಮೊಯ್ದಿನಬ್ಬ‌ ಹಾಜಿ, ಮುಸ್ತಫಾ ಕೆಂಪಿ, ಮಾಜಿ ಮೇಯರ್ ಕೆ.ಅಶ್ರಫ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News