ಎನ್.ಡಬ್ಲ್ಯು.ಎಫ್. ರಾಜ್ಯಾಧ್ಯಕ್ಷೆಯಾಗಿ ಝೀನತ್ ಬಂಟ್ವಾಳ ಆಯ್ಕೆ

Update: 2018-12-10 08:18 GMT

ಬಂಟ್ವಾಳ, ಡಿ.10: ನ್ಯಾಷನಲ್ ವುಮೆನ್ಸ್  ಫ್ರಂಟ್(ಎನ್.ಡಬ್ಲ್ಯು.ಎಫ್.)ನ ನೂತನ ರಾಜ್ಯಾಧ್ಯಕ್ಷೆಯಾಗಿ ಝೀನತ್ ಬಂಟ್ವಾಳ ಆಯ್ಕೆಯಾಗಿದ್ದಾರೆ.

ಡಿ.8 ಮತ್ತು 9ರಂದು ಮಿತ್ತೂರಿನ ಫ್ರೀಡಂ ಕಮ್ಯೂನಿಟಿ ಹಾಲ್ ನಲ್ಲಿ ಜರುಗಿದ ರಾಜ್ಯ ಪ್ರತಿನಿಧಿ ಸಭೆಯಲ್ಲಿ ನಡೆದ ಮುಂದಿನ ಎರಡು ವರ್ಷಗಳ ಅವಧಿಗೆ ಎನ್.ಡಬ್ಲ್ಯು.ಎಫ್. ರಾಜ್ಯ ಪದಾಧಿಕಾರಿಗಳ ಚುನಾವಣೆಯಲ್ಲಿ ಈ ಆಯ್ಕೆ ನಡೆಯಿತು.

ಉಪಾಧ್ಯಕ್ಷರಾಗಿ ಶಬಾನ ಶರೀಫ್ ಬೆಂಗಳೂರು, ಪ್ರಧಾನ ಕಾರ್ಯದರ್ಶಿಯಾಗಿ ತಬಸ್ಸುಮ್ ಅರಾ ತುಮಕೂರು, ಜೊತೆ ಕಾರ್ಯದರ್ಶಿಯಾಗಿ ನಸೀಮಾ ಬೆಂಗಳೂರು, ಕೋಶಾಧಿಕಾರಿಯಾಗಿ ನುಸ್ಹತ್  ಫಾತಿಮಾ ಯಾದಗಿರ್ ಆಯ್ಕೆಯಾದರು. 

ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯೆಯರಾಗಿ ಅಲ್ಮಾಸ್ ಬಾನು ಬೆಂಗಳೂರು, ಝರೀನಾ ಮೈಸೂರು, ಫರ್ಝಾನ ಮುಹಮ್ಮದ್ ಮಂಗಳೂರು, ಫಾತಿಮಾ ನಸೀಮಾ ಮಂಗಳೂರು, ಸಯೀದಾ ಯೂಸೂಫ್ ಮಂಗಳೂರು, ಆಯಿಶಾ ಮುಹಮ್ಮದಿ ಬೆಂಗಳೂರು ಆಯ್ಕೆಯಾದರು.

ಸಭೆಯ ಅಧ್ಯಕ್ಷತೆಯನ್ನು ನಿಕಟಪೂರ್ವ ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾ ವಹಿಸಿದ್ದರು. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಲುಬ್ನಾ ಮಿನ್ ಹಾಝ್ ಉದ್ಘಾಟಿಸಿದರು.

ಸಭೆಯಲ್ಲಿ ನಿಕಟಪೂರ್ವ ರಾಜ್ಯ ಪ್ರಧಾನ ಕಾರ್ಯದರ್ಶಿ ಸಯೀದಾ ಯೂಸುಫ್ 2018ರ ಸಾಲಿನ ಸಂಘಟನಾ ಚಟುವಟಿಕೆಗಳ ವರದಿ ವಾಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News