ಪೂಂಜಾಲಕಟ್ಟೆ: ಡಿ.11ರಂದು ‘ಪ್ರವಾದಿ ಸಂದೇಶ’ ಕಾರ್ಯಕ್ರಮ

Update: 2018-12-10 12:27 GMT

ಬಂಟ್ವಾಳ, ಡಿ.10: ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್‌ನ ಪೂಂಜಾಲಕಟ್ಟೆ ಸಮಿತಿಯ ವತಿಯಿಂದ ‘ಪ್ರವಾದಿ ಸಂದೇಶ’ ಕಾರ್ಯಕ್ರಮವು ಡಿ.11ರಂದು ರಾತ್ರಿ 7ಕ್ಕೆ ಪೂಂಜಾಲಕಟ್ಟೆ ಬದ್ರಿಯಾ ಜುಮಾ ಮಸೀದಿಯ ಬಳಿ ನಡೆಯಲಿದೆ.

ಇಲ್ಲಿನ ಬದ್ರಿಯಾ ಮಸೀದಿಯ ಖತೀಬ್ ಅಶ್ರಫ್ ಫೈಝಿ ದುಆಗೈಯುವರು. ಇಮಾಮ್ಸ್ ಕೌನ್ಸಿಲ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಜಾಫರ್ ಸಾದಿಕ್ ಫೈಝಿ ಅಧ್ಯಕ್ಷತೆ ವಹಿಸುವರು.

ಇಮಾಮ್ಸ್ ಕೌನ್ಸಿಲ್ ಕೇರಳ ಸಮಿತಿಯ ಕೆ.ಕೆ.ಅಬ್ದುಲ್ ಮಜೀದ್ ಖಾಸಿಮಿ ಸಂದೇಶ ಭಾಷಣ ಮಾಡುವರು. ಮುಖ್ಯ ಅತಿಥಿಯಾಗಿ ರಿಯಾಝ್ ಫರಂಗಿಪೇಟೆ ಭಾಗವಹಿಸುವರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News