ಹೃದಯಾಘಾತ: ಅಯ್ಯಪ್ಪ ವ್ರತಧಾರಿ ಮೃತ್ಯು

Update: 2018-12-11 17:18 GMT

ಬಂಟ್ವಾಳ, ಡಿ. 11: ಅಯ್ಯಪ್ಪ ವ್ರತಧಾರಿ,  ಕಾವಳಮೂಡೂರಿನ ಗ್ರಾಮ ಪಂಚಾಯತ್ ಸಿಬ್ಬಂದಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಚೆಂಗನ್ನೂರು ರೈಲ್ವೆ ನಿಲ್ದಾಣದಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.

ಕಾವಳಕಟ್ಟೆ ನಿವಾಸಿ ಮುತ್ತಯ್ಯ ಭಂಡಾರಿ ಅವರ ಮಗ ಪೂವಪ್ಪ ಭಂಡಾರಿ (45)  ಮೃತರು ಎಂದು ಗುರುತಿಸಲಾಗಿದೆ.

ಅವಿವಾಹಿತರಾಗಿರುವ ಅವರು ಕಾವಳಮೂಡೂರು ಗ್ರಾಮ ಪಂಚಾಯತ್ ನಲ್ಲಿ ಕಳೆದ 30 ವರ್ಷಗಳಿಂದ  ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.          ಇವರು ಸೋಮವಾರ ಏಕಾಂಗಿಯಾಗಿ ಶಬರಿಮಲೆ ಅಯ್ಯಪ್ಪ ದರ್ಶನಕ್ಕೆ ತೆರಳಿದ್ದು, ದೇವರ  ದರ್ಶನ ಪಡೆದು ವಾಪಸು ಊರಿಗೆ ಬರಲು ಮಧಾಹ್ನ ಚೆಂಗನ್ನೂರು ರೈಲ್ವೆ ನಿಲ್ದಾಣಕ್ಕೆ ಬಂದಿಳಿದಿದ್ದರು. ಅಲ್ಲಿ ತಲುಪುತ್ತಿದ್ದಂತೆ ಹೃದಯಾಘಾತಕ್ಕೊಳಗಾಗಿದ್ದ  ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಅವರ ಚೀಲದಲ್ಲಿ ಪತ್ತೆಯಾದ ಮೊಬೈಲ್ ಸಂಖ್ಯೆಯ ಆಧಾರದಲ್ಲಿ ಅವರ ಗುರುತು ಹಚ್ಚಿರುವ ರೈಲ್ವೆ ಅಧಿಕಾರಿಗಳು ಅವರ ಮನೆಗೆ ಸುದ್ದಿ ಮುಟ್ಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News