​ಬಂಟ್ವಾಳ: ದುಷ್ಕರ್ಮಿಗಳ ತಂಡದಿಂದ ಮೂವರಿಗೆ ಚೂರಿ ಇರಿತ

Update: 2018-12-11 17:40 GMT

ಬಂಟ್ವಾಳ, ಡಿ. 11: ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಮೂವರಿಗೆ ಚಾಕುವಿನಿಂದ ಇರಿದ ಘಟನೆ ಬಂಟ್ವಾಳ ತಾಲೂಕಿನ ಬಿ‌.ಸಿ‌.ರೊಡ್ ಕೈಕಂಬದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಇಲ್ಲಿನ ಶಾಂತಿಯಂಗಡಿ, ತಾಳಿಪಡ್ಪು ನಿವಾಸಿಗಳಾದ ಅನ್ಸಾರ್ (23), ಸಫ್ವಾನ್ (23), ಹಾಗೂ ಫಯಾಝ್ (23) ಇರಿತಕ್ಕೊಳಗಾಗಿದ್ದು, ಈ ಮೂವರನ್ನು ತುಂಬೆಯಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಂದು ರಾತ್ರಿ 10ಗಂಟೆಯ ಸುಮಾರಿಗೆ ಕಾರಿನಲ್ಲಿ ಬಂದ ತಂಡವೊಂದು ಇಲ್ಲಿನ ಕೈಕಂಬದ ಬಳಿ ನಿಂತಿದ್ದ ಈ ಮೂವರಿಗೆ ಹಲ್ಲೆ ನಡೆಸಿ, ನಂತರ ಚಾಕುವಿನಿಂದ ಇರಿದು ಪರಾರಿಯಾಗಿದೆ ಎಂದು ಪ್ರತ್ಯೇಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಬಂಟ್ವಾಳ ನಗರ ಠಾಣೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News