​ಬಾವಿಗೆ ಬಿದ್ದು ಮೃತ್ಯು

Update: 2018-12-12 16:46 GMT

ಕಾರ್ಕಳ, ಡಿ.12: ವಿಪರೀತ ಮದ್ಯಪಾನ ಮಾಡುವ ಅಭ್ಯಾಸ ಹೊಂದಿದ್ದ ಚೆಲುವರಾಜ್ (48) ಎಂಬವರು ಡಿ.10ರಂದು ರಾತ್ರಿ ಮನೆಗೆ ನಡೆದು ಕೊಂಡು ಹೋಗುತ್ತಿದ್ದಾಗ ಕುಕ್ಕುಂದೂರು ಗ್ರಾಮದ ನಿಜಮಂಡೆ ದರ್ಖಾಸು ಎಂಬಲ್ಲಿರುವ ಪುದ್ದು ಎಂಬವರ ಆವರಣಗೋಡೆ ಇಲ್ಲದ ಬಾವಿಗೆ ಅಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾರೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News