ಪುಂಜಾಲಕಟ್ಟೆ: ಪ್ರವಾದಿ ಸಂದೇಶ ಕಾರ್ಯಕ್ರಮ

Update: 2018-12-12 16:51 GMT

ಬೆಳ್ತಂಗಡಿ, ಡಿ. 12: ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ದೇಶದಾದ್ಯಂತ ಹಮ್ಮಿಕೊಂಡ ಪ್ರವಾದಿ (ಸ.ಅ) ಜನರೊಂದಿಗೆ ಎಂಬ ಅಭಿಯಾನದ ಭಾಗವಾಗಿ ಪುಂಜಾಲಕಟ್ಟೆಯಲ್ಲಿ ಪ್ರವಾದಿ ಸಂದೇಶ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಹು. ಜಾಫರ್ ಸಾದಿಕ್ ಫೈಝಿ ವಹಿಸಿದ್ದರು. ಜುಮ್ಮಾ ಮಸೀದಿ ಪುಂಜಾಲಕಟ್ಟೆ ಖತೀಬ್ ಅಶ್ರಫ್ ಫೈಝಿ ದುಆಃ ದೊಂದಿಗೆ ಕಾರ್ಯಕ್ರಮವನ್ನು ಉದ್ಘಾಟನೆಗೈದರು. ಎಐಐಸಿ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಫೀಕ್ ದಾರಿಮಿ ಕಾರ್ಯಕ್ರಮವನ್ನು ಸ್ವಾಗತಿಸಿದ ಬಳಿಕ ಕೆ.ಕೆ ಅಬ್ದುಲ್ ಮಜೀದ್ ಖಾಸಿಮಿ ಮುಖ್ಯ ಪ್ರಭಾಷಣಗೈದರು. ಕಾರ್ಯಕ್ರಮದಲ್ಲಿ ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಫರಂಗಿಫೇಟೆ ಮುಖ್ಯ ಅತಿಥಿ ಭಾಷಣಗೈದರು.

ವೇದಿಕೆಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬೆಳ್ತಂಗಡಿ ಅಧ್ಯಕ್ಷರಾದ ಇಕ್ಬಾಲ್ ಬಂಗೇರಕಟ್ಟೆ, ಬಿಜೆಎಂ ಪುಜಾಲಕಟ್ಟೆ ಅಧ್ಯಕ್ಷರಾದ ಪಿ.ಯೂಸುಫ್ ಹಾಜಿ, ಎಸ್ಡಿಪಿಐ ಬೆಳ್ತಂಗಡಿ ಅಧ್ಯಕ್ಷ ನವಾಝ್ ಷರೀಫ್, ಪಿಎಫ್ಐ ಮಡಂತ್ಯಾರು ವಲಯ ಅಧ್ಯಕ್ಷ ನಿಝಾರ್, ಸಿಎಫ್ಐ ಬೆಳ್ತಂಗಡಿ ಇದರ ನೌಫಲ್ ಪುಂಜಾಲಕಟ್ಟೆ,ಪಿಎಫ್ಐ ಪುಂಜಾಲಕಟ್ಟೆ ಅಧ್ಯಕ್ಷರಾದ ನೌಷಾದ್ ಹಾಗೂ ಕಾವೇರಿ ಟ್ರೇಡರ್ಸ್ ಮಾಲಕರಾದ ಮಹಮ್ಮದ್ ಯಹ್ಯಾ ಪುಂಜಾಲಕಟ್ಟೆ ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಅಝರ್ ವಂದಿಸಿದರು, ಶಾಕಿರ್ ಪುಂಜಾಲಕಟ್ಟೆ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News