​ಮರದಿಂದ ಬಿದ್ದು ಕೃಷಿ ಕೂಲಿಗಾರ ಮೃತ್ಯು

Update: 2018-12-13 16:18 GMT

ಕೊಲ್ಲೂರು, ಡಿ.13: ಕೃಷಿ ಕೂಲಿಗಾರರೊಬ್ಬರು ಮರದಿಂದ ಬಿದ್ದು ಮೃತಪಟ್ಟ ಘಟನೆ ಡಿ.12ರಂದು ಬೆಳಗ್ಗೆ 11:30ರ ಸುಮಾರಿಗೆ ಮುದೂರು ಎಂಬಲ್ಲಿ ನಡೆದಿದೆ.

ಮೃತರನ್ನು ಸ್ಕರಿಯಾ ಎನ್.ಜೆ. ಎಂಬವರ ಮಗ ಸನ್ನಿ ಎನ್.ಎಸ್.(47) ಎಂದು ಗುರುತಿಸಲಾಗಿದೆ. ಕೃಷಿ ಕೂಲಿಗಾರರಾಗಿರುವ ಇವರು, ಸೂಲಾಬೇರು ಟಿ.ಜಿ. ಎಂಬವರ ಜಾಗದಲ್ಲಿರುವ ಮರವನ್ನು ಕಡಿಯಲು ಹತ್ತಿದ್ದು, ಈ ವೇಳೆ ಆಕಸ್ಮಿಕವಾಗಿ ಆಯತಪ್ಪಿ ಮರದಿಂದ ಬಿದ್ದು ತೀವ್ರವಾಗಿ ಗಾಯಗೊಂಡ ಅವರು ಕುಂದಾಪುರ ಸರಕಾರಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು ಎಂದು ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News