ಆಲಂಗಾರು: ಬಾವಿಗೆ ಬಿದ್ದು ಮೃತ್ಯು

Update: 2018-12-13 16:30 GMT

ಬಂಟ್ವಾಳ, ಡಿ. 13: ವ್ಯಕ್ತಿಯೊಬ್ಬರು ಬಾವಿಯಲ್ಲಿದ್ದ ಪಂಪ್ ನೋಡುತ್ತಿದ್ದ ವೇಳೆ  ಜಾರಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ವಿಟ್ಲ ಮುಡ್ನೂರು ಗ್ರಾಮದ ಆಲಂಗಾರು ಎಂಬಲ್ಲಿ ಗುರುವಾರ ನಡೆದಿದೆ. 

ಆಲಂಗಾರು ನಿವಾಸಿ ತುಕ್ರನಾಯ್ಕ(60) ಮೃತಪಟ್ಟವರು.

ಇವರು ತನ್ನ ಮನೆ ಮುಂಭಾಗದಲ್ಲಿದ್ದ ಬಾವಿಯಲ್ಲಿ ಇರಿಸಿದ್ದ ಪಂಪ್ ಕೆಟ್ಟು ಹೋಗಿದ್ದರಿಂದ ಅದನ್ನು ದುರಸ್ತಿ ಮಾಡಲೆಂದು ಬಾವಿಯನ್ನು ಇಣುಕಿ ನೋಡುತ್ತಿ ದ್ದಂತೆ ಜಾರಿ ಬಾವಿಗೆ ಬಿದ್ದು ನೀರಿನಲ್ಲಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ.

ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News