ಇಕ್ಬಾಲ್ ಬಾಳಿಲಗೆ 'ಪೀಸ್ - ಎವೆರ್ನೆಸ್ ಟ್ರಸ್ಟ್' ವತಿಯಿಂದ ಸೇವಾ ರತ್ನ ಪ್ರಶಸ್ತಿ

Update: 2018-12-15 11:45 GMT

ಮಂಗಳೂರು, ಡಿ. 15: ಸುಳ್ಯ ತಾಲೂಕಿನ ಬಾಳಿಲ ಗ್ರಾಮದ ನಿವಾಸಿ ಯುವ ಮುಖಂಡ ಇಕ್ಬಾಲ್ ಬಾಳಿಲ ಅವರಿಗೆ ಚಿಕ್ಕ ಮಗಳೂರು ಜಿಲ್ಲೆಯ ಮೂಡಿಗೆರೆ ಪೀಸ್ ಮತ್ತು ಎವೆರ್ನೆಸ್ ಟ್ರಸ್ಟ್ ನಾಲ್ಕನೇ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ "ಸೇವಾ ರತ್ನ" ಪ್ರಶಸ್ತಿ ಘೋಷಿಸಿದೆ.

ಡಿ.16 ರಂದು ಚಿಕ್ಕಮಗಳೂರು ಜೇಸಿ ಭವನದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಓರ್ವ ತರಬೇತುದಾರರಾಗಿ, ಕನ್ನಡ ಭಾಷಣದ ಮೂಲಕ ಯುವ ವಾಗ್ಮಿಯಾಗಿ, ಹಳವು ಸಂಘ ಸಂಸ್ಥೆಗಳಿಗೆ ಮಾರ್ಗದರ್ಶಕರಾಗಿ, ದಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವುದನ್ನು ಗುರುತಿಸಿ ಗೌರವಿಸಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ.

ಇಕ್ಬಾಲ್ ಬಾಳಿಲ ಶೈಕ್ಷಣಿಕ ಕ್ಷೇತ್ರದ ಟ್ರೆಂಡ್ ಜಿಲ್ಲಾ ಸಮಿತಿ ಸಂಚಾಲಕರಾಗಿ, ಜಿಲ್ಲಾ ಎಸ್ಕೆಎಸ್ಸೆಸ್ಸೆಫ್ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಮಾನವರು ಸಹೋದರರು ಸೌಹಾರ್ದ ವೇದಿಕೆ ಜಿಲ್ಲಾ ಲೆಕ್ಕ ಪರಿಶೋಧಕರಾಗಿ, ಮಾನವ ಹಕ್ಕು ಒಕ್ಕೂಟ ರಾಜ್ಯ ತರಬೇತುದಾರರಾಗಿ ಹಲವು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News