ಡಿ.18ರಂದು ಅನುಸ್ಮರಣಾ ಸಮ್ಮೇಳನ- ಕೇಸ್ ಡೈರಿ

Update: 2018-12-15 12:17 GMT

ಮಂಗಳೂರು, ಡಿ.15: ಅರ್ಶದೀಸ್ ಅಸೋಸಿಯೇಶನ್ ವತಿಯಿಂದ ದ.ಕ. ಜಿಲ್ಲೆಯ ಮಹೋನ್ನತ ಖಾಝಿಗಳಾಗಿದ್ದ ಶೈಖುನಾ ಕೋಟ ಉಸ್ತಾದ್ ಹಾಗೂ ಸಿ.ಎಂ.ಉಸ್ತಾದ್ ಅವರ ಅನುಸ್ಮರಣೆ ಮತ್ತು ಸಮನ್ವಯ ವಿದ್ಯಾಭ್ಯಾಸ ಕೇಂದ್ರದ ಕುಲಪತಿಯಾಗಿದ್ದ ಸಿ.ಎಂ.ಉಸ್ತಾದರ ಅಸಹಜ ಸಾವು ಪ್ರಕರಣದ ಕೇಸ್ ಡೈರಿಯು ಡಿ.18ರಂದು ಬೆಳಗ್ಗೆ 10:30ಕ್ಕೆ ಬಂಟ್ವಾಳ ತಾಲೂಕಿನ ಮಾಣಿ ನೇರಳಕಟ್ಟೆ ಇಂಡಿಯನ್ ಆಡಿಟೋರಿಯಂನಲ್ಲಿ ಜರಗಲಿದೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅರ್ಶದೀಸ್ ಅಸೋಸಿಯೇಶನ್‌ನ ಹಾಗೂ ಕಾರ್ಯಕ್ರಮದ ಸ್ವಾಗತ ಸಮಿತಿಯ ಪ್ರಧಾನ ಸಂಚಾಲಕ ಕೆ.ಯು. ಖಲೀಲ್ ರಹ್ಮಾನ್ ಅರ್ಶದಿ ಕೋಲ್ಪೆ, ದ.ಕ. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಮಹಾ ಸಮ್ಮೇಳನವನ್ನು ಸಮಸ್ತ ಉಪಾಧ್ಯಕ್ಷ ಮಿತ್ತಬೈಲ್ ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಉದ್ಘಾಟಿಸಲಿದ್ದಾರೆ ಎಂದರು.

ಸಮಸ್ತ ಕರ್ನಾಟಕ ಮುಶಾವರ ಅಧ್ಯಕ್ಷ ಸೈಯದ್ ಝೈನುಲ್ ಆಬಿದೀನ್ ತಂಙಳ್ ದುಆಗೈಯಲಿದ್ದು, ಸೈಯದ್ ಅಹ್ಮದ್ ಪೂಕೋಯ ತಂಙಳ್ ಪುತ್ತೂರು ತಹ್ಲೀಲ್ ಸಮರ್ಪಣೆ ನಡೆಸಲಿದ್ದಾರೆ. ಹಸನ್ ಅರ್ಶದಿ ಬೆಳ್ಳಾರೆ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ಕುರ್‌ಆನ್ ಪಂಡಿತ ರಹ್ಮತುಲ್ಲಾ ಖಾಸಿಮಿ ಮುತ್ತೇಡಂ, ಅಂತರರಾಷ್ಟ್ರೀಯ ವಾಗ್ಮಿ ಇಬ್ರಾಹೀಂ ಖಲೀಲ್ ಹುದವಿ, ನ್ಯಾಯವಾದಿ ಹನೀಫ್ ಹುದವಿ ದೇಲಂಪಾಡಿ ಮುಖ್ಯ ಪ್ರಭಾಷಣಗೈಯಲಿದ್ದಾರೆ. ಬೆಳಗ್ಗೆ 9:30ಕ್ಕೆ ನಡೆಯುವ ಅರ್ಶದಿ ಸಂಗಮದಲ್ಲಿ ಶೈಖುನಾ ಕೊಡುವಳ್ಳಿ ಉಸ್ತಾದ್ ಹಾಗೂ ಇಬ್ರಾಹೀಂ ಕುಟ್ಟಿ ದಾರಿಮಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಯು.ಎಂ.ಉಸ್ತಾದ್, ಝೈನುಲ್‌ ಆಬಿದೀನ್ ಜಿಫ್ರಿ ತಂಙಳ್, ಸೈಯದ್ ಅಮೀರ್ ತಂಙಳ್ ಕಿನ್ಯ, ಸಿ.ಕೆ.ಕೆ. ಮಾಣಿಯೂರ, ಮಾಜಿ ಸಚಿವ ರಮಾನಾಥ ರೈ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಎ.ಬಾವ, ಅಬ್ದುಲ್ ರವೂಫ್ ಪುತ್ತಿಗೆ, ಬಿ.ಎಚ್.ಖಾದರ್ ಬಂಟ್ವಾಳ, ಮುಹಮ್ಮದ್ ಮಸೂದ್ ಹಾಜಿ, ಮಾಜಿ ಶಾಸಕ ಮೊಯ್ದಿನ್ ಬಾವ, ಬಿ.ಕೆ.ಅಬ್ದುಲ್ ಖಾದರ್ ಮುಸ್ಲಿಯಾರ್ ಬಂಬ್ರಾಣ, ಉಸ್ಮಾನುಲ್ ಫೈಝಿ, ಖಾಸಿಂ ದಾರಿಮಿ ಕಿನ್ಯ, ಅನೀಸ್ ಕೌಸರಿ, ಟಿ.ಎಂ.ಶಹೀದ್, ಮಾಜಿ ಮೇಯರ್ ಕೆ.ಅಶ್ರಫ್, ಜುನೈದ್ ಜಿಫ್ರಿ ತಂಙರ್ಳ ಆತೂರು, ಎಸ್.ಎಂ.ತಂಙಳ್ ಸಾಲ್ಮರ, ಶರಫುದ್ದೀನ್ ತಂಙಳ್ ಸಾಲ್ಮರ ಮತ್ತಿತರರು ಭಾಗವಹಿಸಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಅರ್ಶದೀಸ್ ಅಸೋಸಿಯೇಶನ್‌ನ ಅಧ್ಯಕ್ಷ ಶರೀಫ್ ಅರ್ಶದಿ ಅಡ್ಡೂರ್, ಸ್ವಾಗತ ಸಮಿತಿಯ ಸಹ ಸಂಚಾಲಕ ಶರೀಫ್ ಅರ್ಶದಿ ಈಶ್ವರಮಂಗಲ, ಸದಸ್ಯ ಹಲೀಂ ಅರ್ಶದಿ ಮಲಾರ್, ತಸ್ಲೀಂ ಅರ್ಶದಿ ಅಮೆಮಾರ್ ಉಪಸ್ಥಿತರಿದ್ದರು.

‘ಉಸ್ತಾದ್ ನಿಗೂಢ ಸಾವು ಮರುತನಿಖೆಯಾಗಲಿ’

ಒಂಬತ್ತು ವರ್ಷಗಳ ಹಿಂದೆ ಕಾಣದ ಕೈಗಳು ಕೊಲೆ ಮಾಡಿರುವ ಸಿ.ಎಂ.ಉಸ್ತಾದ್ ನಿಗೂಢ ಸಾವಿನ ಪ್ರಕರಣ ಮರು ತನಿಖೆಯಾಗಬೇಕು. ಪ್ರಕರಣದ ರಹಸ್ಯ ಬಯಲಾಗಬೇಕು. ಸಿಬಿಐ ಆರೋಗ್ಯಕರ ತನಿಖೆ ನಡೆಸದೆ ಏಕಾಏಕಿ ಆತ್ಮಹತ್ಯೆ ಎಂದು ವರದಿ ಸಲ್ಲಿಸಿದೆ. ಕೇರಳ ಉಚ್ಚ ನ್ಯಾಯಾಲಯ ಪ್ರಕರಣವನ್ನು ತಳ್ಳಿ ಹಾಕಿದೆ. ಈ ಹಿನ್ನೆಲೆ ಜನಾಭಿಪ್ರಾಯಕ್ಕೆ ಸ್ಥಾನ ಕಲ್ಪಿಸಬೇಕು ಎಂದು ಸಮ್ಮೇಳನದಲಿ ಆಗ್ರಹಿಸಲಾಗುತ್ತದೆ. ಕಾಸರಗೋಡಿನಲ್ಲಿ 60 ದಿನಗಳಲ್ಲಿ ನಡೆದು ಬರುವ ಸಹಿ ಸಂಗ್ರಹ ಹಾಗೂ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಕೇರಳ ಸರಕಾರ ತಿರುಗಿ ನೋಡದೆ ಇರುವುದು ಖೇದಕರವಾಗಿದೆ ಎಂದು ಅರ್ಶದೀಸ್ ಅಸೋಸಿಯೇಶನ್‌ನ ಹಾಗೂ ಕಾರ್ಯಕ್ರಮದ ಸ್ವಾಗತ ಸಮಿತಿಯ ಪ್ರಧಾನ ಸಂಚಾಲಕ ಕೆ.ಯು.ಖಲೀಲ್ ರಹ್ಮಾನ್ ಅರ್ಶದಿ ಕೋಲ್ಪೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News