ಉಡುಪಿ: ವಿಶೇಷ ಮಕ್ಕಳ ಚಿಕಿತ್ಸೆಗೆ ಆರ್ಥಿಕ ನೆರವಿಗೆ ಮನವಿ

Update: 2018-12-15 14:08 GMT

ಉಡುಪಿ, ಡಿ.15: ಮಣಿಪಾಲ 80ನೆ ಬಡಗಬೆಟ್ಟಿನ ನೇತಾಜಿ ನಗರದ ಅಬ್ದುಲ್ ರೆಹ್ಮಾನ್ ಹಾಗೂ ಅಮಿನ ದಂಪತಿಯ ಇಬ್ಬರು ವಿಶೇಷ ಮಕ್ಕಳ ಚಿಕಿತ್ಸೆಗೆ ನೆರವು ಕಲ್ಪಿಸುವಂತೆ ದಾನಿಗಳಲ್ಲಿ ಮನವಿ ಮಾಡಲಾಗಿದೆ.

ಇವರ ಐವರು ಮಕ್ಕಳಲ್ಲಿ ರಿಯಾಝ್ (26) ಮತ್ತು ನೌಶಾದ್ (20) ಎಂಬವರು ಶೇ.80ರಷ್ಟು ಅಂಗವೈಕ್ಯಲದಿಂದ ಮನೆಯಲ್ಲಿ ಇದ್ದು, ಉಡುಪಿಯ ಮಕ್ಕಳ ತಜ್ಞ ಡಾ. ಅಶೋಕ್ ಕುಮಾರ್ ಅವರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ತಾಯಿ ಬೀಡಿ ಕಟ್ಟುತ್ತಿದ್ದರೆ ತಂದೆ ವಾಚ್ ಮೆನ್ ಆಗಿ ಕೆಲಸ ಮಾಡುತ್ತಿದ್ದಾರೆ.

ಈ ಬಡ ಕುಟುಂಬ ಮಕ್ಕಳ ನಿರ್ವಹಣೆ ಹಾಗೂ ಚಿಕಿತ್ಸೆ ಹಣ ಇಲ್ಲದೆ ಕಷ್ಟದ ಬದುಕು ಸಾಗಿಸುತ್ತಿದೆ. ಈ ಕುಟುಂಬಕ್ಕೆ ನೆರವು ನೀಡುವವರು ಅಮಿನಾ, ಸಿಂಡಿಕೇಟ್ ಬ್ಯಾಂಕ್ ಮಣಿಪಾಲ ಶಾಖೆ, ಅಕೌಂಟ್ ನಂಬರ್ 02322210 025359, ಐಎಫ್‌ಎಸ್‌ಸಿ ಕೋಡ್- ಎಸ್‌ವೈಎನ್‌ಬಿ0000232ಗೆ ನೆರವು ನೀಡಬೇಕೆಂದು ವಿನಂತಿಸಲಾಗಿದೆ. ಇವರ ವಿಳಾಸ ನೇತಾಜಿ ನಗರ, 80 ಬಡಗಬೆಟ್ಟು, ಮಣಿಪಾಲ ಅಂಚೆ, ಮೊಬೈಲ್ ನಂಬರ್- 9731229325.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News