ಕೋಟೆಬಾಗಿಲು ಶಾಲಾ ನೂತನ ಕೊಠಡಿ ಉದ್ಘಾಟನೆ

Update: 2018-12-15 14:13 GMT

ಕುಂದಾಪುರ, ಡಿ.15: ತಲ್ಲೂರು ಕೋಟೆಬಾಗಿಲು ಸರಕಾರಿ ಕಿರಿಯ ಪ್ರಾಥ ಮಿಕ ಶಾಲೆಯ ನೂತನ ಕೊಠಡಿಯನ್ನು ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಇತ್ತೀಚೆಗೆ ಉದ್ಘಾಟಿಸಿದರು.

 ಜಿಪಂ ಅನುದಾನದಲ್ಲಿ ಶಾಲೆಗೆ ನೀಡಿರುವ ಪೀಠೋಪಕರಣವನ್ನು ಜಿಪಂ ಸದಸ್ಯೆ ಜ್ಯೋತಿ ಶಾಲೆಗೆ ಹಸ್ತಾಂತರಿಸಿದರು. ಅಂಬೇಡ್ಕರ್ ಯುವಕ ಸಂಘದ ಸ್ಥಾಪಕ ಅಧ್ಯಕ್ಷ ಬೋಜರಾಜ ಶಾಲಾ ಮಕ್ಕಳಿಗೆ ಬೆಲ್ಟ್ ಹಾಗೂ ಆಟೋಪಕರಣ ಗಳನ್ನು ಶಾಲಾ ಮುಖ್ಯೋಪಾಧ್ಯಾಯ ವಿಠಲ್ ಕಾಮತ್‌ರಿಗೆ ಹಸ್ತಾಂತರಿಸಿದರು. ಅಧ್ಯಕ್ಷತೆಯನ್ನು ತಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷ ಆನಂದ ಬಿಲ್ಲವ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ, ತಾಪಂ ಸದಸ್ಯ ಕರುಣಾ ಪೂಜಾರಿ, ಗ್ರಾಪಂ ಸದಸ್ಯರಾದ ಸುನೀಲ್ ಖಾರ್ವಿ, ಚಂದ್ರಮತಿ ಹೆಗ್ಡೆ, ಉದಯಕುಮಾರ್ ತಲ್ಲೂರು, ಅಂಬೇಡ್ಕರ್ ಸಂಘದ ಅಧ್ಯಕ್ಷ ರಘುರಾಮ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಹರೀಶ್, ಸಮನ್ವಯಾ ಅಧಿಕಾರಿ ಅಬ್ದುಲ್ ರವೂಫ್, ಶಿಕ್ಷಣ ಸಂಯೋಜಕ ನಿತ್ಯಾನಂದ ಶೆಟ್ಟಿ, ತಲ್ಲೂರು ಕ್ಲಸ್ಟರ್ ಸಿ.ಆರ್.ಪಿ. ಸುರೇಂದ್ರ ನಾಯ್ಕಿ, ಶಾಲಾ ಪೋಷಕರಾದ ಮೇರಿ ಮೆನೇಜಸ್, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಟಿ.ರಮೇಶ್ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಶಾಲಾ ಗೋಡೆಗೆ ಚಿತ್ರ ಬಿಡಿಸಿದ ಕಲಾವಿದ ಶಂಕರ ಹಂದಾಡಿ ಅವರನ್ನು ಸನ್ಮಾನಿಸಲಾಯಿತು. ಆಟೋಟ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಸಂತ ಕುಮಾರ ವಂಡ್ಸೆ ಕಾರ್ಯಕ್ರಮ ನಿರೂಪಿಸಿದರು. ಜೂಲಿಯಾನ ಡಾಯಸ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News