ಕಾಪು : ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

Update: 2018-12-15 16:58 GMT

ಕಾಪು, ಡಿ. 15: ಬೈಕ್ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದಾತನನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಕೆ. ಸಾಧಿಕ್ ಎಂದು ಗುರುತಿಸಲಾಗಿದೆ. ಈತನನ್ನು ದಾವಣಗೆರೆ ಜಿಲ್ಲೆಯ ಟಿಪ್ಪು ನಗರದಿಂದ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ನ್ಯಾಯಾಲಯ ಈತನಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಸಾಧಿಕ್‍ನ ಮೇಲೆ ಉಡುಪಿ ನಗರ ಠಾಣೆ, ಕುಂದಾಪುರ, ಗಂಗೊಳ್ಳಿ, ಬೈಂದೂರು ಠಾಣೆಯಲ್ಲಿ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ವಾರೆಂಟ್ ಬಾಕಿ ಇತ್ತು. 2008ರಲ್ಲಿ ಪ್ರಕರಣ ದಾಖಲಾದ ನಂತರ ಗಂಗೊಳ್ಳಿಯ ಮನೆಯನ್ನು ಮಾರಾಟ ಮಾಡಿ ನಂತರ ಭಟ್ಕಳ, ಬೈಂದೂರು, ಕೇರಳಗಳಲ್ಲಿ ತಲೆಮರೆಸಿಕೊಂಡಿದ್ದು, ಐದು ವರ್ಷದಿಂದ ಚನ್ನಗಿರಿಯಲ್ಲಿ 2ನೇ ಮದುವೆಯಾಗಿ ವಾಸವಾಗಿದ್ದ. ಮೊದಲ ಹೆಂಡತಿಗೆ 2 ಮಕ್ಕಳಿದ್ದಾರೆ. ಕಾಪು ಠಾಣೆಯ ವಾರೆಂಟ್ ಸಿಬ್ಬಂದಿ ಸುಧಾಕರ ಭಂಡಾರಿ ಮತ್ತು ಸಂದೇಶ ಭಂಡಾರಿ ದಾವಣಗೆರೆಗೆ ತೆರಳಿ ಬಂಧಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News