ಉಡುಪಿ: ಆಶಾ ನಿಲಯದಲ್ಲಿ ಕುಮಾರಸ್ವಾಮಿ ಹುಟ್ಟುಹಬ್ಬ ಆಚರಣೆ

Update: 2018-12-16 15:29 GMT

ಉಡುಪಿ, ಡಿ.16: ಉಡುಪಿ ಜಿಲ್ಲಾ ಜೆಡಿಎಸ್ ವತಿಯಿಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ 59ನೇ ಹುಟ್ಟುಹಬ್ಬವನ್ನು ಉಡುಪಿಯ ಆಶಾ ನಿಲಯ ವಿಶೇಷ ಮಕ್ಕಳ ಶಾಲೆಯಲ್ಲಿ ರವಿವಾರ ಆಚರಿಸಲಾಯಿತು.

ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ವಿ.ಶೆಟ್ಟಿ ವಿಶೇಷ ಮಕ್ಕಳ ಜೊತೆ ಕೇಕ್ ಕತ್ತರಿಸಿದರು. ಬಳಿಕ ಮಕ್ಕಳಿಗೆ ಕೇಕ್ ಹಂಚಿ, ಭೋಜನದ ವ್ಯವಸ್ಥೆಯನ್ನು ಮಾಡಲಾಯಿತು.

ಈ ಸಂದರ್ಭದಲ್ಲಿ ಕಾರ್ಯಾಧ್ಯಕ್ಷ ವಾಸುದೇವ ರಾವ್, ಮಂಜಯ್ಯ ಶೆಟ್ಟಿ, ಜಯರಾಮ ಆಚಾರ್ಯ, ವೀಕ್ಷಕ ಸುಧಾಕರ ಶೆಟ್ಟಿ, ಮಹಾಪ್ರಧಾನ ಕಾರ್ಯ ದರ್ಶಿ ಶ್ರೀಕಾಂತ್ ಅಡಿಗ, ಜಯಕುಮಾರ್ ಪರ್ಕಳ, ಗಂಗಾಧರ ಬಿರ್ತಿ, ಶೇಖರ್ ಕೋಟ್ಯಾನ್, ರೋಹಿತ್ ಕರಂಬಳ್ಳಿ, ಸಚಿನ್ ಜೆ.ಎ., ಮಹಮ್ಮದ್ ಹ್ಯಾರಿಸ್, ಶಾಲಿನಿ ಶೆಟ್ಟಿ, ಬಿ.ಕೆ.ಮಹಮ್ಮದ್, ಚಂದ್ರಹಾಸ್ ಎರ್ಮಾಳ್, ವೆಂಕಟೇಶ್ ಪಡುಬಿದ್ರಿ, ರಮೇಶ್ ಕುಂದಾಪುರ, ಬಿ.ಟಿ.ಮಂಜುನಾಥ್, ರಂಜಿತ್ ಕುಮಾರ್ ಶೆಟ್ಟಿ, ತಾರನಾಥ ಶೆಟ್ಟಿ, ಪ್ರದೀಪ್ ಜಿ., ರಮೇಶ್ ಮಾಸ್ಟರ್, ವಿಶಾಲಾಕ್ಷಿ ಶೆಟ್ಟಿ, ದಿಲ್ಶಾದ್, ರಫೀಕ್, ಲತೀಫ್, ಪ್ರಕಾಶ್ ಶೆಟ್ಟಿ, ವಿನ್ಸೆಂಟ್ ಅಲ್ಮೆಡ್, ರೋಶ್ನಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News