ಮಂಗಳೂರು: ಬ್ಯಾಂಕ್‌ಗೆ ವಂಚಿಸಿದ ಆರೋಪಿಯ ವಿರುದ್ಧ ದೂರು

Update: 2018-12-16 15:49 GMT

ಮಂಗಳೂರು, ಡಿ. 16: ವ್ಯಾಪಾರಕ್ಕಾಗಿ ಪಡೆದ ಬ್ಯಾಂಕ್ ಸಾಲವನ್ನು ಸರಿಯಾಗಿ ಮರುಪಾವತಿಸದೆ ವ್ಯಾಪಾರ ಮಳಿಗೆಯನ್ನು ಬೇರೊಬ್ಬರಿಗೆ ಹಸ್ತಾಂತರಿಸಿ ಬ್ಯಾಂಕ್‌ಗೆ ವಂಚಿಸಿದ ಬಗ್ಗೆ ಉಳ್ಳಾಲದ ಸಂದೇಶ್ ಕಿಣಿ ಎಂಬಾತನ ವಿರುದ್ಧ ಕಾರ್ಪೊರೇಶನ್ ಬ್ಯಾಂಕ್‌ನ ಎ.ಬಿ. ಶೆಟ್ಟಿ ವೃತ್ತ ಶಾಖೆಯ ಮ್ಯಾನೇಜರ್ ನಗರದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಆರೋಪಿ ಸಂದೇಶ್ ಕಿಣಿ ನಗರದ ಗೋಕುಲ್ ಮಾರ್ಕೆಟ್‌ನಲ್ಲಿ ಕ್ರೀಡಾ ಸಾಮಗ್ರಿಗಳ ಮಾರಾಟ ಮಳಿಗೆಯನ್ನು ಆರಂಭಿಸಲು 2015ರಲ್ಲಿ 50 ಲಕ್ಷ ರೂ. ಸಾಲವನ್ನು ಕಾರ್ಪೊರೇಶನ್ ಬ್ಯಾಂಕ್‌ನ ಎ.ಬಿ. ಶೆಟ್ಟಿ ವೃತ್ತ ಶಾಖೆಯಿಂದ ಪಡೆದಿದ್ದು, ವ್ಯಾಪಾರ ಆರಂಭಿಸಿ 2017ರ ತನಕ ಸಾಲದ ಕಂತುಗಳನ್ನು ಮರು ಪಾವತಿಸಿದ್ದ ಕಿಣಿ ಬಳಿಕ ಸಾಲ ಮರುಪಾವತಿ ಮಾಡಿರಲಿಲ್ಲ. ಈ ಮಧ್ಯೆ ಅಂಗಡಿಯಲ್ಲಿದ್ದ ಕ್ರೀಡಾ ಸಾಮಗ್ರಿಗಳೆಲ್ಲವನ್ನೂ ಮಾರಾಟ ಮಾಡಿದ್ದಲ್ಲದೆ ಮಳಿಗೆಯನ್ನು ಬೇರೊಬ್ಬರಿಗೆ ಹಸ್ತಾಂತರಿಸಿದ್ದಾನೆನ್ನಲಾಗಿದೆ. ಅಲ್ಲದೆ ಆರೋಪಿ ಸಂದೇಶ್ ಕಿಣಿ ನಾಪತ್ತೆಯಾಗಿದ್ದಾನೆ ಎಂದು ಬ್ಯಾಂಕ್ ಮ್ಯಾನೇಜರ್ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News