ಅಂದರ್ ಬಾಹರ್: ನಾಲ್ವರ ಬಂಧನ

Update: 2018-12-16 15:54 GMT

ಕುಂದಾಪುರ, ಡಿ.16: ಆನಗಳ್ಳಿ ಗ್ರಾಮದ ಕೆಂಪನತೊಪ್ಲು ಎಂಬಲ್ಲಿ ಶನಿವಾರ ಮಧ್ಯಾಹ್ನ  ಅಂದರ್-ಬಾಹರ್ ಜುಗಾರಿ ಆಡುತ್ತಿದ್ದ ನಾಲ್ವರನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಹೆರಾಲ್ಡ್ ಡಿಸೋಜ, ಪೀಟರ್ ಡೇಸಾ, ಮಂಜ ಗಾಣಿಗ, ಉರ್ಬನ್ ಡಿಸೋಜ ಎಂದು ಗುರುತಿಸಲಾಗಿದೆ. ಇವರಿಂದ ನಗದು ವಶಪಡಿಸಿ ಕೊಳ್ಳಲಾಗಿದೆ.

ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News