ಕಲ್ಲಿಕೋಟೆ : ಯಮಾನಿಯ್ಯ ಸಮ್ಮೇಳನ ಸಮಾರೋಪ

Update: 2018-12-16 17:42 GMT

ಕಲ್ಲಿಕೋಟೆ, ಡಿ. 16:  ಶಂಸುಲ್ ಉಲಮಾ ಸ್ಮಾರಕ ಇಸ್ಲಾಮಿಕ್ ಸೆಂಟರ್ ಜಾಮಿಅಃ ಯಮಾನಿಯ್ಯ ಅರೇಬಿಕ್ ಕಾಲೇಜ್ ಕುಟ್ಟಿಕಟ್ಟೂರ್ ಕಲ್ಲಿಕೋಟೆ ಇದರ 19 ನೇ ವಾರ್ಷಿಕ ಹಾಗೂ 6 ನೇ ಸನದುಧಾನ ಮಹಾ ಸಮ್ಮೇಳನವು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಶೈಖುನಾ ಆಲಿಕುಟ್ಟಿ ಉಸ್ತಾದ್  ಅಧ್ಯಕ್ಷತೆಯಲ್ಲಿ ನಡೆಯಿತು. 

ಸಮ್ಮೇಳನವನ್ನು ಪಾಣ್ಣಕ್ಕಾಡ್ ಹೈದರಾಲಿ ಶಿಹಾಬ್ ತಂಙಳ್ ಉದ್ಘಾಟಿಸಿದರು.

ಸನದುಧಾನ ಪ್ರಭಾಷಣ ವನ್ನು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಅಧ್ಯಕ್ಷರೂ ಕಾಲೇಜಿನ ಪ್ರಾಶುಂಪಾಲರಾದ ಶೈಖುನಾ ಸೈಯದುಲ್ ಉಲಮಾ ಜಿಫ್ರೀ ಮುತ್ತುಕೋಯ ತಂಙಳ್ ಮಾಡಿದರು.

ವೇದಿಕೆಯಲ್ಲಿ ಶೈಖುನಾ ಕೊಯ್ಯೋಡ್ ಉಮ್ಮರ್ ಮುಸ್ಲಿಯಾರ್, ಮಾಣಿಯೂರ್ ಅಹಮದ್ ಮುಸ್ಲಿಯಾರ್, ಅಬ್ದುಲ್ ಹಮೀದ್ ಪೈಝಿ ಅಂಬಲಕಡವ್, ಸತ್ತಾರ್ ಪಂದಲೂರ್, ನಝೀಮುದ್ದೀನ್ ಪೋಕೋಯ ತಂಙಳ್ ಅಲ್ ಯಮಾನಿ, ವಳವಣ್ಣ ಅಬೂಬಕರ್ ದಾರಿಮಿ, ಗಪೂರ್ ದಾರಿಮಿ, ಸಲೀಂ ದಾರಿಮಿ ಮುಂತಾದವರು ಭಾಗವಹಿಸಿದರು. ಕುಟ್ಟಿ ಹಸನ್ ದಾರಿಮಿ ಸ್ವಾಗತಿಸಿ, ಅಬೂಬಕರ್ ದಾರಿಮಿ ವಂದಿಸಿದರು. ಮಿರ್ಷಾದ್ ಯಮಾನಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News