ಮೂಡಿಗೆರೆ: ಇಕ್ಬಾಲ್ ಬಾಳಿಲರಿಗೆ 'ಸೇವಾ ರತ್ನ ಪ್ರಶಸ್ತಿ' ಪ್ರದಾನ

Update: 2018-12-16 17:45 GMT

ಮೂಡಿಗೆರೆ, ಡಿ. 16: ಪೀಸ್ ಮತ್ತು ಅವರ್ನೆಸ್ ಸೊಸೈಟಿ ಇದರ ನಾಲ್ಕನೇ ವಾರ್ಷಿಕೋತ್ಸವವು ಮೂಡಿಗೆರೆಯ ಜೇಸಿ ಭವನದಲ್ಲಿ ರವಿವಾರ ನಡೆಯಿತು.

ಈ ವಾರ್ಷಿಕೋತ್ಸವ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನ, ಸಮಾಜ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡವರಿಗೆ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸುಳ್ಯ ತಾಲೂಕಿನ ಯುವ ವಾಗ್ಮಿ ಇಕ್ಬಾಲ್ ಬಾಳಿಲ ಅವರಿಗೆ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಸ್ತುತ ಇವರು ಓರ್ವ ಸಂಘಟನಾ ಚತುರರಾಗಿ, ಯುವ ವಾಗ್ಮಿಯಾಗಿ, ತರಬೇತುದಾರರಾಗಿ, ಹಲವು ಸಂಘಸಂಸ್ಥೆಗಳ ಮಾರ್ಗದರ್ಶಕರಾಗಿ, ಎಸ್ ಕೆ ಎಸ್ ಎಸ್ ಎಫ್ ಕಾರ್ಯಾಕಾರಿ ಸಮಿತಿ ಸದಸ್ಯರಾಗಿ, ಮಾನವರು ಸಹೋದರರು ಸೌಹಾರ್ದ ವೇದಿಕೆ ಜಿಲ್ಲಾ ಲೆಕ್ಕ ಪರಿಶೋಧಕರಾಗಿ, ಮಾನವ ಹಕ್ಕು ಒಕ್ಕೂಟ ರಾಜ್ಯ ತರಬೇತುದಾರರಾಗಿ, ಶೈಕ್ಷಣಿಕ ಕ್ಷೇತ್ರದ ಟ್ರೆಂಡ್ ಜಿಲ್ಲಾ ಸಮಿತಿ ಸದಸ್ಯರಾಗಿ ಹಲವು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News