ಮಂಗಳೂರು: ಮೀನಿನ ಮಲೀನ ನೀರು ರಸ್ತೆಗೆ; ಲಾರಿಯನ್ನು ತಡೆದ ಸಾರ್ವಜನಿಕರು

Update: 2018-12-18 17:58 GMT

ಮಂಗಳೂರು, ಡಿ. 18: ಮೀನಿನ ಮಲೀನ ನೀರನ್ನು ರಸ್ತೆಗೆ ಬಿಡುವ ಮೂಲಕ ದುರ್ವಾಸನೆ ಹಾಗೂ ಬೈಕ್ ಸವಾರರ ಚಾಲನೆಗೆ ತೊಂದರೆ ನೀಡುತ್ತಿದ್ದ ಮೀನಿನ ಲಾರಿಯನ್ನು  ಸಾರ್ವಜನಿಕರು ತಡೆದು ಲಾರಿ ಮತ್ತು ಚಾಲಕನನ್ನು ಪೊಲೀಸ್ ವಶಕ್ಕೆ ನೀಡಿದ ಘಟನೆ ಮಂಗಳೂರು ನಗರದ ಮಣ್ಣಗುಡ್ಡ ಜಂಕ್ಷನ್‌ ನಲ್ಲಿ ನಡೆದಿದೆ.

ಮಂಗಳೂರು ಮೀನುಗಾರಿಕಾ ಬಂದರಿನಿಂದ ಮೀನು ತುಂಬಿಸಿ ಉಡುಪಿ ಕಡೆಗೆ ಸಾಗುತ್ತಿದ್ದ ಲಾರಿಯಿಂದ ಮಲೀನ ನೀರು ರಸ್ತೆ ತುಂಬೆಲ್ಲಾ ಚೆಲ್ಲುತ್ತಾ ಸಾಗುತ್ತಿದ್ದು, ತೈಲ ಮಿಶ್ರಿತ ನೀರಿನಿಂದ ಇಬ್ಬರು ದ್ವಿಚಕ್ರ ಸವಾರರೂ ನಿಯಂತ್ರಣ ತಪ್ಪಿ ಅಫಘಾತಕ್ಕೀಡಾಗಿದ್ದರು ಎನ್ನಲಾಗಿದ್ದು, ಇದರಿಂದ ಆಕ್ರೋಶ ಗೊಂಡ ಸ್ಥಳೀಯರು ಲಾರಿಯನ್ನು ಬೆನ್ನಟ್ಟಿ ಮಣ್ಣಗುಡ್ಡ ಜಂಕ್ಷನ್‌ನಲ್ಲಿ ಅಡ್ಡಹಾಕಿ ಲಾರಿ ಮತ್ತು ಚಾಲಕನ್ನು ತೀವ್ರ ತರಾಟೆಗೆ ತೆಗೆದುಕೊಂಡು ಬರ್ಕೆ ಪೊಲೀಸರಿಗೆ ಒಪ್ಪಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News