ಕಿನ್ನಿಗೋಳಿಯ ಅಂಗಡಿ ಮಾಲಕ ಆತ್ಮಹತ್ಯೆ
Update: 2018-12-20 17:23 GMT
ಮುಲ್ಕಿ, ಡಿ. 20: ಇಲ್ಲಿನ ಠಾಣೆ ವ್ಯಾಪ್ತಿಯ ಕಿನ್ನಿಗೋಳಿ ಸಮೀಪದ ಮೆನ್ನಬೆಟ್ಟು ಗ್ರಾಮದ ಕಾಪಿಕಾಡು ನವೋದಯನಗರ ನಿವಾಸಿಯೊಬ್ಬರು ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಮೃತರನ್ನು ಸುದರ್ಶನ ಪೂಜಾರಿ(32) ಎಂದು ಗುರುತಿಸಲಾಗಿದೆ.
ಮೃತ ಸುದರ್ಶನ್ ಕಿನ್ನಿಗೋಳಿಯಲ್ಲಿ ಪಾದರಕ್ಷೆ ಅಂಗಡಿಯಿದ್ದು ಗುರುವಾರ ಮಧ್ಯಾಹ್ನದ ವೇಳೆಯಲ್ಲಿ ತಮ್ಮ ಮನೆಯಾದ ಮೆನ್ನಬೆಟ್ಟು ಗ್ರಾಮದ ರಾಜರತ್ನಾಪುರ ಬಳಿಯ ನವೋದಯನಗರಕ್ಕೆ ಬಂದಿದ್ದು ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಮುಲ್ಕಿ ಠಾಣೆ ಪೊಲೀಸರು ತಿಳಿಸಿದ್ದಾರೆ.