ಕಾಪು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ

Update: 2018-12-21 14:22 GMT

ಶಿರ್ವ, ಡಿ. 21: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾಪು ಘಟಕದ ಆಶ್ರಯದಲ್ಲಿ ಶಿರ್ವ ಸಮೀಪದ ಕುತ್ಯಾರು ಶ್ರೀಪರಶುರಾಮೇಶ್ವರ ಕ್ಷೇತ್ರದ ಶ್ರೀಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಸ್ಕೂಲ್ ಸಭಾಂಗಣದಲ್ಲಿ ಗುರು ವಾರ ಆಯೋಜಿಸಲಾದ ತಾಲೂಕಿನ ಪ್ರಪ್ರಥಮ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು.

ಜಗನ್ನಾಥ ಬಂಗೇರ ಮಟ್ಟು(ಜಾನಪದ ಕಂಗೀಲು),ಸತೀಶ್ ಶೆಟ್ಟಿ ಕುತ್ಯಾರು (ಹೊರನಾಡಿನಲ್ಲಿ ಕನ್ನಡ ಸಾಹಿತ್ಯ), ಕೃಷ್ಣ ಶೆಟ್ಟಿಗಾರ್ ಇಂದ್ರಪುರ ಶಿರ್ವ (ಪ್ರಗತಿ ಪರ ಕೃಷಿಕ), ರಾಮಚಂದ್ರ ಆಚಾರ್ಯ ಪಡುಬಿದ್ರೆ(ಮಾಧ್ಯಮ), ಲತಾ ತಂತ್ರಿ ಕುತ್ಯಾರು(ಶಾಸ್ತ್ರೀಯ ಸಂಗೀತ), ವಿ.ಎಸ್.ಕೇಂಜ(ವ್ಯಂಗ್ಯ ಚಿತ್ರಕಲೆ), ಸಾಧು ಪಾಣರ(ಭೂತಾರಾಧನೆ), ಜ್ಯೋತಿ ಬೆಳಪು(ಕ್ರೀಡೆ), ಅರುಣ್ ಡಿಸೋಜ ಪಿಲಾರುಖಾನ(ಧಾರ್ಮಿಕ/ಸಮಾಜಸೇವೆ) ಇವರನ್ನು ಸನ್ಮಾನಿಸಲಾಯಿತು.

ಸಮ್ಮೇಳನದ ಸರ್ವಾಧ್ಯಕ್ಷ ಮುದ್ದು ಮೂಡುಬೆಳ್ಳೆ ಮಾತನಾಡಿ, ತುಳು ಮತ್ತು ಕೊಂಕಣಿ ಭಾಷೆ ಮಾತೃಭಾಷೆಯಾಗಿ ಮಾತನಾಡುತ್ತಿದ್ದ ಕಾಪು ತಾಲೂಕಿನಲ್ಲಿ ಬಹುತೇಕರು ಕನ್ನಡ ಭಾಷೆಯನ್ನು ಪಠ್ಯದ ಮೂಲಕ ಕಲಿತುಕೊಂಡು, ಒಪ್ಪಿಕೊಂಡು ಬೆಳೆಸಿದವರು. ಈ ನಾಡಿನಲ್ಲೂ ಕನ್ನಡ ಸಾಹಿತ್ಯ ಸಮ್ಮೇಳನ ಅದ್ದೂರಿಯಾಗಿ ನಡೆದಿದ್ದು, ಕನ್ನಡ ಭಾಷಾ ಸಾಹಿತ್ಯ ಈ ಮೂಲಕ ಉತ್ತುಂಗಕ್ಕೇ ರಲು ಸಾಧ್ಯವಾಗಲಿದೆ ಎಂದರು.

ಉದ್ಯಮಿ, ಸಮಾಜ ಸೇವಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಮನುಷ್ಯನ ಅಂತಕಃರಣವನ್ನು ಅಲುಗಾಡಿಸುವ ಶಕ್ತಿ ಸಾಹಿತ್ಯಕ್ಕಿದೆ. ಸಾಹಿತ್ಯ ಮಾನವತೆಯ ಕಡೆಗೆ ಮುಖಮಾಡಿ ನಡೆಯಬೇಕು. ಇಂದಿನ ಮಕ್ಕಳಲ್ಲಿ ಓದುವ ಸಂಸ್ಕೃತಿ ನಶಿಸುತ್ತಿದ್ದು ಇಂತಹ ಕಾರ್ಯಕ್ರಮಗಳ ಮೂಲಕ ಮಕ್ಕಳಲ್ಲಿ ಭಾಷಾಭಿಮಾನ, ಸಾಹಿತ್ಯಾಸಕ್ತಿ ಮೂಡಿಸಬೇಕು ಎಂದು ಹೇಳಿದರು.

ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಸಮಾರೋಪ ಭಾಷಣ ಮಾಡಿದರು. ಅಧ್ಯಕ್ಷತೆಯನ್ನು ಕಾಪು ಘಟಕದ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ವಹಿಸಿದ್ದರು. ಶಿರ್ವ ಶ್ರೀಮಹಾಲಸಾ ದೇವಳದ ಅರ್ಚಕ ರಘುರಾಮ ಶೆಣೈ, ಬ್ರಹ್ಮಾವರ ಕಸಾಪ ಅಧ್ಯಕ್ಷ ಸೂರಾಲು ನಾರಾಯಣ ಮಡಿ, ಕಾರ್ಕಳ ಕಸಾಪ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ, ಕಟಪಾಡಿ ಬೀಡು ವಿನಯ ಬಲ್ಲಾಳ್, ಕಾರ್ಕಳ ತಾಲೂಕು ಕಸಾಪ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ, ನಿವೃತ್ತ ಬ್ಯಾಂಕ್ ಅಧಿಕಾರಿ ವಿಜಯ ಶಂಕರಪುರ ಉಪಸ್ಥಿತರಿದ್ದರು.

ಸ್ವಾಗತ ಸಮಿತಿಯ ಉಪಾಧ್ಯಕ್ಷ ನವೀನ್ ಶೆಟ್ಟಿ ಕುತ್ಯಾರು ಸ್ವಾಗತಿಸಿದರು. ಕಾರ್ಯದರ್ಶಿ ಪ್ರಸಾದ್ ಶೆಟ್ಟಿ ಕುತ್ಯಾರು ವಂದಿಸಿದರು. ತಾಲೂಕು ಸಮಿತಿಯ ಕೋಶಾಧಿಕಾರಿ ಎಸ್.ಎಸ್.ಪ್ರಸಾದ್, ಪ್ರವೀಣ್ ಆಚಾರ್ಯ, ನಾರಾಯಣ ನಾಯ್ಕಾ ನಿರ್ವಹಿಸಿದರು. ತಾಲೂಕು ಸಮಿತಿ ಸದಸ್ಯ ಅಲ್ವಿನ್ ದಾಂತಿ ಕಾರ್ಯ ಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News