ಸೆಕ್ಸ್ ಸಿಡಿ ಹಗರಣದಲ್ಲಿ ಹೆಸರು ಕೇಳಿ ಬಂದ ಪತ್ರಕರ್ತ ಛತ್ತೀಸ್‌ಗಡ ಮುಖ್ಯಮಂತ್ರಿ ಸಲಹೆಗಾರ

Update: 2018-12-21 17:08 GMT

ರಾಯಪುರ, ಡಿ. 21: ಕಳೆದ ವರ್ಷ ಸೆಕ್ಸ್ ಸಿಡಿ ಹಗರಣದಲ್ಲಿ ಹೆಸರು ಕೇಳಿ ಬಂದ ಹಿರಿಯ ಪತ್ರಕರ್ತ ವಿನೋದ್ ವರ್ಮಾ ಅವರು ಛತ್ತೀಸ್‌ಗಡದ ಮುಖ್ಯಮಂತ್ರಿ ಭೂಪೇಶ್ ಬೇಲ್ ಅವರ ರಾಜಕೀಯ ಸಲಹೆಗಾರರಾಗಿ ಗುರುವಾರ ನೇಮಕವಾಗಿದ್ದಾರೆ.

ಮುಖ್ಯಮಂತ್ರಿ ಅವರಿಗೆ ನಾಲ್ವರು ಸಲಹೆಗಾರರನ್ನು ಸಾಮಾನ್ಯ ಆಡಳಿತ ಇಲಾಖೆ ನಿಯೋಜಿಸಿದೆ. ಬೇಲ್ ಅವರ ರಾಜಕೀಯ ಸಲಹೆಗಾರರಾಗಿ ವರ್ಮಾ, ಮಾಧ್ಯಮ ಸಲಹೆಗಾರರಾಗಿ ಮಾಜಿ ಪತ್ರಕರ್ತ ರುಚಿರ್ ಗರ್ಗ್ ನಿಯೋಜಿತರಾಗಿದ್ದಾರೆ ಎಂದು ಹೇಳಿಕೆ ತಿಳಿಸಿದೆ. ಇದಲ್ಲದೆ, ಯೋಜನೆ, ನೀತಿ, ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಸಲಹೆಗಾರರಾಗಿ ಪ್ರದೀಪ್ ಶರ್ಮಾ ಹಾಗೂ ಸಂಸದೀಯ ಸಲಹೆಗಾರರಾಗಿ ರಾಜೇಶ್ ತಿವಾರಿ ನಿಯೋಜಿತರಾಗಿದ್ದಾರೆ ಎಂದು ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News