ಉತ್ತರಾಖಂಡದಲ್ಲಿ ಭೂಕುಸಿತ : 7 ಸಾವು, ಇಬ್ಬರಿಗೆ ಗಂಭೀರ ಗಾಯ

Update: 2018-12-21 16:56 GMT

ಡೆಹ್ರಾಡೂನ್, ಡಿ. 21: ರುದ್ರಪ್ರಯಾಗ್-ಗೌರಿಕುಂಡ್‌ನ ಬನ್ಸ್ವಾರ ಪ್ರದೇಶದಲ್ಲಿ ಶುಕ್ರವಾರ ಅಪರಾಹ್ನ ಸಂಭವಿಸಿದ ಭೂಕುಸಿತದಿಂದ 7 ಮಂದಿ ಮೃತಪಟ್ಟಿದ್ದಾರೆ ಹಾಗೂ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.

ಚಾರ್‌ಧಾಮ್ ಸರ್ವಋತು ರಸ್ತೆ ನಿರ್ಮಾಣದ ಸಂದರ್ಭ ಈ ದುರ್ಘಟನೆ ಸಂಭವಿಸಿದೆ. ಬೆಟ್ಟವನ್ನು ಒಂದು ಭಾಗದಲ್ಲಿ ಅಗೆಯುತ್ತಿ ರುವಾಗ ಅದು ಕುಸಿಯಿತು. ಕೂಡಲೇ ಕೆಲವರು ಜಿಲ್ಲಾ ವಿಪತ್ತು ಕಚೇರಿಗೆ ಮಾಹಿತಿ ನೀಡಿದರು. ಮೃತಪಟ್ಟವರಲ್ಲಿ ಹೆಚ್ಚಿನವರು ಉತ್ತರಪ್ರದೇಶ ಹಾಗೂ ಬಿಹಾರದವರು. ದುರಂತವನ್ನು ದೃಢಪಡಿಸಿರುವ ಜಿಲ್ಲಾ ವಿಪತ್ತು ನಿರ್ವಹಣಾ ತಂಡ, ‘‘ರುದ್ರಪ್ರಯಾಗ-ಗೌರಿಕುಂಡ್ ಹೆದ್ದಾರಿಯ ಬನ್ಸ್ವಾರದಲ್ಲಿ ಈ ದುರಂತ ಸಂಭವಿಸಿದೆ.

ಘಟನೆಯಲ್ಲಿ 7 ಮಂದಿ ಮೃತಪಟ್ಟಿದ್ದಾರೆ. ಇಬ್ಬರು ಗಾಯಗೊಂಡಿದ್ದಾರೆ. ಅವರನ್ನು ಸಮೀಪದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ’’ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News