ರಾಮಮಂದಿರ ನಿರ್ಮಾಣ ಎನ್ ಡಿಎಯ ಅಜೆಂಡಾ ಅಲ್ಲ: ನಿತೀಶ್ ಕುಮಾರ್

Update: 2018-12-23 15:26 GMT

ಪಾಟ್ನಾ, ಡಿ.23: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಎನ್ ಡಿಎಯ ಅಜೆಂಡಾ ಅಲ್ಲ ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಹೇಳಿದ್ದಾರೆ. ಈ ವಿಚಾರದಲ್ಲಿ ಲೋಕ್ ಜನಶಕ್ತಿ ಪಕ್ಷದ ಚಿರಾಗ್ ಪಾಸ್ವಾನ್ ಅವರ ಅಭಿಪ್ರಾಯವನ್ನೇ ತಾನು ಹೊಂದಿರುವುದಾಗಿ ಅವರು ತಿಳಿಸಿದರು.

“ನಾವು ಬಿಹಾರದಲ್ಲಿ ಅಭಿವೃದ್ಧಿಗೆ ಬದ್ಧರಾಗಿದ್ದೇವೆ” ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ನಿತೀಶ್ ಕುಮಾರ್ ಹೇಳಿದರು. “ಕೋರ್ಟ್ ನಿರ್ಧಾರದಿಂದಲೇ ರಾಮ ಮಂದಿರ ನಿರ್ಮಾಣ ವಿಚಾರ ಬಗೆಹರಿಯಬೇಕು ಎನ್ನುವ ಅಭಿಪ್ರಾಯ ನಮ್ಮದು” ಎಂದವರು ಹೇಳಿದರು. ರಾಮ ಮಂದಿರ ನಿರ್ಮಾಣ ಬಿಜೆಪಿಯ ಅಜೆಂಡಾ ಹೊರತು ಎನ್ ಡಿಎಯದ್ದಲ್ಲ ಎಂದು ಚಿರಾಗ್ ಪಾಸ್ವಾನ್ ಈ ಹಿಂದೆ ಹೇಳಿಕೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News