×
Ad

ಭೀಕರ ಸರಣಿ ಅಪಘಾತ: ಏಳು ಜನರು ಬಲಿ

Update: 2018-12-24 12:34 IST

ರೋಹ್ಟಕ್, ಡಿ.24: ಬೆಳಗ್ಗಿನ ಮಂಜು ಮಸುಕಿದ ವಾತಾವರಣದಿಂದಾಗಿ 50ಕ್ಕೂ ಅಧಿಕ ವಾಹನಗಳ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ಏಳು ಮಂದಿ ಮೃತಪಟ್ಟಿರುವ ಘಟನೆ ಹರ್ಯಾಣದ ಜನನಿಬಿಡ ಮೇಲ್ಸೇತುವೆಯಲ್ಲಿ ಸೋಮವಾರ ನಡೆದಿದೆ.

ಮಂಜು ಕವಿದ ವಾತಾವರಣದಲ್ಲಿ ರಸ್ತೆ ಕಾಣದ ಹಿನ್ನೆಲೆಯಲ್ಲಿ ಈ ಭೀಕರ ಸರಣಿ ಅಪಘಾತ ಸಂಭವಿಸಿದೆ. ಘಟನೆಯು ರೋಹ್ಟಕ್-ರೆವಾರಿ ಹೆದ್ದಾರಿಯಲ್ಲಿ ನಡೆದಿದೆ.

  ಸರಣಿ ಢಿಕ್ಕಿಯಾದ ವಾಹನಗಳಲ್ಲಿ ಸ್ಕೂಲ್ ಬಸ್ ಹಾಗೂ ಕಾರುಗಳು ಅಧಿಕ ಸಂಖ್ಯೆಯಲ್ಲಿದ್ದವು. ಮೃತಪಟ್ಟಿರುವ 7 ಜನರ ಪೈಕಿ ಆರು ಮಂದಿ ಮಹಿಳೆಯರು ಸೇರಿದ್ದಾರೆ.

ಹರ್ಯಾಣ, ದಿಲ್ಲಿ, ಪಂಜಾಬ್, ಉತ್ತರಪ್ರದೇಶ ಹಾಗೂ ರಾಜಸ್ಥಾನದಲ್ಲಿ ಇಂದು ಬೆಳಗ್ಗೆ ದಟ್ಟ ಮಂಜು ಆವರಿಸಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News