×
Ad

​ಯುವಕನಿಗೆ ದುಷ್ಕರ್ಮಿಗಳಿಂದ ಹಲ್ಲೆ, ಜೀವ ಬೆದರಿಕೆ: ದೂರು

Update: 2018-12-25 22:51 IST

ಮಂಗಳೂರು, ಡಿ.25: ನಗರದ ಬಲ್ಲಾಳ್‌ಬಾಗ್ ಸೇಸಪ್ಪ ಕಂಪೌಂಡ್ ನಿವಾಸಿ ಧೀರಜ್ (26) ಎಂಬವರಿಗೆ ನಾಲ್ಕು ಮಂದಿಯ ತಂಡ ಹಲ್ಲೆ ನಡೆಸಿ ಜೀವಬೆದರಿಕೆಯೊಡ್ಡಿದ ಘಟನೆ ನಡೆದಿದೆ.

ರಕ್ಷಿತ್ ಕೊಟ್ಟಾರಿ, ರೋಹಿತ್ ಶೆಟ್ಟಿ, ಸೂರಜ್ ಕೊಟ್ಟಾರಿ ಮತ್ತು ದಿನೇಶ್ ಹಲ್ಲೆಗೈದವರು ಎಂದು ಗುರುತಿಸಲಾಗಿದೆ.

ಧೀರಜ್‌ ಪಿವಿಎಸ್ ಬಳಿ ಇರುವ ಲ್ಯಾಪ್‌ಟಾಪ್ ಶೋರೂಂನಲ್ಲಿ ಸರ್ವೀಸ್ ಮತ್ತು ಸೇಲ್ಸ್ ಕೆಲಸವನ್ನು ಮಾಡುತ್ತಿದ್ದರು. ಈ ವೇಳೆ ನಾಲ್ವರು ಆರೋಪಿಗಳು ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಈ ಬಗ್ಗೆ  ಬರ್ಕೆ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News