ಡಿ.27: ಅಳೇಕಲದಲ್ಲಿ ಸುನ್ನೀ ಆದರ್ಶ ಸಂಗಮ
Update: 2018-12-26 22:22 IST
ಉಳ್ಳಾಲ, ಡಿ. 26: ಎಸ್ ವೈ ಎಸ್ ಅಳೇಕಲ, ಮಾರ್ಗತಲೆ ಮತ್ತು ಮಂಚಿಲ ಇದರ ಜಂಟಿ ಆಶ್ರಯದಲ್ಲಿ ಸುನ್ನೀ ಆದರ್ಶ ಸಂಗಮವು ಅಳೇಕಲದ ಮದನಿ ಪಿ.ಯು ಕಾಲೇಜು ಹತ್ತಿರದ ಮೈದಾನದಲ್ಲಿ ಗುರುವಾರ ನಡೆಯಲಿದೆ.
ಅಲ್ಹಾಜ್ ಅಬೂಝಿಯಾದ್ ಮದನಿ ಪಟ್ಟಾಂಬಿ ಉಸ್ತಾದರು ದುಆ ನೆರೆವೇರಿಸಲಿದ್ದಾರೆ. ಜಲಾಲ್ ತಂಙಳ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಅಬ್ದುಲ್ ವಹ್ಹಾಬ್ ಸಖಾಫಿ ಮಂಬಾಡ್ ವಿಷಯ ಮಂಡಿಸಲಿದ್ದಾರೆ ಎಂದು ಅಶ್ರಫ್ ಸುಳ್ಯ ತಿಳಿಸಿದ್ದಾರೆ.