ಉಪ್ಪಿನಂಗಡಿ: ಸುನ್ನೀ ಜಂ ಇಯ್ಯತುಲ್ ಮುಅಲ್ಲಿಮೀನ್ ರೇಂಜ್ ಪ್ರತಿಭಾ ಸಂಗಮ

Update: 2018-12-26 17:49 GMT

ನೆಲ್ಯಾಡಿ, ಡಿ. 26: ಸುನ್ನೀ ಜಂ ಇಯ್ಯತುಲ್ ಮುಅಲ್ಲಿಮೀನ್ ಉಪ್ಪಿನಂಗಡಿ ರೇಂಜ್  ಇದರ ವತಿಯಿಂದ ಪ್ರತಿಭಾ ಸಂಗಮ ಮತ್ತು ತಾಜುಲ್ ಉಲಮಾ ಅನುಸ್ಮರಣೆ ಕಾರ್ಯಕ್ರಮ ಉಳಿತೊಟ್ಟು ಮದ್ರಸ ವಠಾರದಲ್ಲಿ ಸ್ಥಳೀಯ ಮಸೀದಿ ಅಧ್ಯಕ್ಷ ಯೂಸುಫ್ ಹಾಜಿ ಧ್ವಜಾರೋಹಣ ಮಾಡುವ ಮೂಲಕ ಅಲ್ ಇಖ್ವಾನ್ ಕಮಿಟಿಯ ಸಹಕಾರ ದೊಂದಿಗೆ ನಡೆಯಿತು.

ಕಾರ್ಯಕ್ರಮದಲ್ಲಿ ಪ್ರತಿಭಾ ಸಂಗಮ ಚೆಯರ್ಮಾನ್ ಅಲ್ ಹಾಜ್ ಉಮರ್ ಕುಂಞಿ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದರು. ಉಳಿತೋಟ್ಟು ಜುಮಾ ಮಸೀದಿ ಖತೀಬ್ ಅಬ್ದುಲ್ ಮಜೀದ್ ಅಹ್ಸನಿ ಕಾರ್ಯಕ್ರಮ ಉದ್ಘಾಟಿಸಿದರು. ದ.ಕ ಜಿಲ್ಲಾ ಈಸ್ಟ್ ವಿಭಾಗದ ಅಧ್ಯಕ್ಷ ಇಬ್ರಾಹಿಂ ಸಖಾಫಿ ಪುಂಡೊರು ಮುಖ್ಯ ಅತಿಥಿಯಾಗಿ ಆಗಮಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಮಗ್ರಿಬ್ ನಮಾಝ್ ಬಳಿಕ ನಡೆದ ಸಮಾರೋಪ ಸಮಾರಂಭದಲ್ಲಿ ರೇಂಜ್ ಅಧ್ಯಕ್ಷ ಮುತ್ತಲಿಬ್ ಸಖಾಫಿ ಅಧ್ಯಕ್ಷತೆ ವಹಿಸಿದರು, ರೇಂಜ್ ಪ್ರಧಾನ ಕಾರ್ಯದರ್ಶಿ ಅಬ್ದುರ್ರಝಾಖ್ ಲತೀಫಿ ಕುಂತೂರು ಸ್ವಾಗತಿಸಿದರು, ಪ್ರತಿಭಾ ಸಂಗಮದಲ್ಲಿ ಪ್ರಥಮ ಸ್ಥಾನ ಪಡೆದ ಸರಳಿಕಟ್ಟೆ ಮದ್ರಸ, ದ್ವಿತೀಯ ಸ್ಥಾನ ಪಡೆದ ಕೆಮ್ಮಾರ ಮದ್ರಸ, ತೃತೀಯ ಸ್ಥಾನ ಪಡೆದ ಹೊಸಮಜಲು ಮದ್ರಸಕ್ಕೂ ಹಾಗೂ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಎಸ್ ವೈ ಎಸ್ ಉಪ್ಪಿನಂಗಡಿ ಸೆಂಟರ್ ಅಧ್ಯಕ್ಷ ಅಸ್ಸಯ್ಯಿದ್ ಸಾದತ್ ತಂಙಳ್ ಕರ್ವೇಲು ದುಅಃ ನೇತೃತ್ವ ವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಸ್ವಲಾವುದ್ದೀನ್ ಸಖಾಫಿ ಮೂಡಡ್ಕ, ಇಲ್ಯಾಸ್ ಸಖಾಫಿ ಕೆಮ್ಮಾರ, ಅಡ್ವಕೇಟ್ ಇಸ್ಮಾಯಿಲ್ ನೆಲ್ಯಾಡಿ, ಹೊಸಮಜಲು ಜುಮಾ ಮಸೀದಿ ಪ್ರ. ಕಾರ್ಯದರ್ಶಿ ಕೆ.ಇ ಅಬೂಬಕರ್ ಶುಭ ಹಾರೈಸಿದರು.

ಉಳಿತೋಟ್ಟು ಜುಮಾ ಮಸೀದಿ ಮಾಜಿ ಅಧ್ಯಕ್ಷ ಉಮರಬ್ಬ ಹಾಜಿ, ಹಾಜಿ ಹಸನಬ್ಬ, ಅಲ್ ಇಖ್ವಾನ್ ಕಮಿಟಿಯ ಅಧ್ಯಕ್ಷ ರಫೀಕ್ ಉಳಿತೋಟ್ಟು, ಪ್ರ. ಕಾರ್ಯದರ್ಶಿ ಹೈದರ್ ತಾಜ್, ನೆಲ್ಯಾಡಿ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ರಝಾಕ್ ಕರಾವಳಿ, ಉಮರ್ ತಾಜ್ ನೆಲ್ಯಾಡಿ‌, ಅಬ್ದುಲ್ ರಝಾಕ್ ಹಾಜಿ ಮೊರಂಕಳ, ಎಸ್ ಎಂ ಎ ಪ್ರ ಕಾರ್ಯದರ್ಶಿ ಬಶೀರ್ ಮದನಿ ಕೆಮ್ಮಾರ, ವಳಾಲ್ ಖತೀಬ್ ಮುಹಮ್ಮದ್ ಮಿಸ್ಬಾಹಿ, ಬಶೀರ್ ಸಅದಿ ಕೆಮ್ಮಾರ, ಎಂ ಎಚ್ ಸಖಾಫಿ ಕರ್ವೇಲು, ಸಮೀರುದ್ದೀನ್ ಪಡುಬೆಟ್ಟು, ಸ್ವಾಗತ ಸಮಿತಿ ಕನ್ವೀನರ್ ಮುಹಮ್ಮದ್ ಸಖಾಫಿ ಬಾಜಾರು, ಉಸ್ಮಾನ್ ಸಅದಿ ತೆಕ್ಕಾರು, ಅಬ್ದುಲ್ ಅಝೀಝ್ ಮುಸ್ಲಿಯಾರ್ ಕುಂತೂರು, ಮುಹಮ್ಮದ್ ರಾಶೀದ್ ಮದನಿ ಮರ್ದಾಲ, ಮುಸ್ತಫ ಸಅದಿ ಪನ್ಯ ಹಾಗೂ ಉಪ್ಪಿನಂಗಡಿ ರೇಂಜ್ ವ್ಯಾಪ್ತಿಯ ಅಧ್ಯಾಪಕರು ವಿದ್ಯಾರ್ಥಿ ಗಳು, ಜಮಾಅತರು ಉಪಸ್ಥಿತರಿದ್ದರು.

ರಫೀಕ್ ಸಖಾಫಿ ನೆಲ್ಯಾಡಿ ಮತ್ತು ಮುಸ್ತಫ ಹಿಮಮಿ ನೆಲ್ಯಾಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News