ಮಗುವಿಗೆ ಅನಾರೋಗ್ಯ, ತಾಯಿ ಆತ್ಮಹತ್ಯೆ

Update: 2018-12-28 16:41 GMT

ಗಂಗೊಳ್ಳಿ, ಡಿ.28: ಮೂರು ವರ್ಷದ ಮಗುವಿಗೆ ಅನಾರೋಗ್ಯದಿಂದ ಚಿಂತಿತರಾದ ತಾಯಿಯೊಬ್ಬರು ಮಾನಸಿಕವಾಗಿ ನೊಂದು ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಪ್ಪುಂದದಿಂದ ವರದಿಯಾಗಿದೆ.

ಉಪ್ಪುಂದ ರಾಘವ ಎಂಬವರ ಪತ್ನಿ ಶಿಲ್ಪಾ(23) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಇವರಿಗೆ ಮೂರು ವರ್ಷದ ಮಗುವಿದ್ದು, ಮಗುವಿಗೆ ಆಗಾಗ ಜ್ವರ ಬರುತ್ತಿದ್ದು, ಕುಂದಾಪುರದಲ್ಲಿ ಚಿಕಿತ್ಸೆ ಮಾಡಿಸಿದರೂ ಗುಣಮುಖವಾಗಿರಲಿಲ್ಲ ಎನ್ನಲಾಗಿದೆ. ಇದರಿಂದ ಮಾನಸಿಕವಾಗಿ ನೊಂದ ಅವರು, ಗುರುವಾರ ಸಂಜೆ ಸಂಜೆ  ಹರ್ಕೂರು ಗ್ರಾಮದ ನಾರ್ಕಳಿಯಲ್ಲಿರುವ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ತಕ್ಷಣ ಅವರನ್ನು ಚಿಕಿತ್ಸೆಗಾಗಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಅವರನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿದ್ದಾಗಿ ತಿಳಿಸಿದರು. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News