×
Ad

​ಮಂಗಳೂರು: ನೂತನ ಎಸಿಪಿಯಾಗಿ ಶ್ರೀನಿವಾಸ ಗೌಡ ಅಧಿಕಾರ ಸ್ವೀಕಾರ

Update: 2018-12-29 21:07 IST

ಮಂಗಳೂರು, ಡಿ. 29: ಮಂಗಳೂರು ನಗರ ಉತ್ತರ (ಪಣಂಬೂರು ವಿಭಾಗ) ಎಸಿಪಿಯಾಗಿದ್ದ ರಾಜೇಂದ್ರ ಅವರಿಂದ ತೆರವಾದ ಸ್ಥಾನಕ್ಕೆ ನೂತನ ಎಸಿಪಿಯಾಗಿ ಶ್ರೀನಿವಾಸ ಗೌಡ ಶನಿವಾರ ಅಧಿಕಾರ ಸ್ವೀಕರಿಸಿದರು.

ಮೂಲತಃ ಚನ್ನರಾಯಪಟ್ಟಣದವರಾದ ಶ್ರೀನಿವಾಸ ಗೌಡ ಅವರು ಬೆಂಗಳೂರಿನ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ‘ಇಲೆಕ್ಟ್ರಾನಿಕ್ ಆ್ಯಂಡ್ ಕಮ್ಯೂನಿಕೇಶನ್’ ನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ.

2016ರ ಐಪಿಎಸ್ ಬ್ಯಾಚ್‌ನವರಾಗಿದ್ದು, ವಿಜಯಪುರದಲ್ಲಿ ಪ್ರೊಬೆಷನರಿ ಅವಧಿ ಮುಗಿಸಿದ್ದಾರೆ. ತದನಂತರ ಹೈದರಾಬಾದ್‌ನಲ್ಲಿ ಫೇಸ್-2 ತರಬೇತಿ ಮುಗಿಸಿದ್ದು, ಉತ್ತರ ವಿಭಾಗದ ಪ್ರಭಾರ ಎಸಿಪಿ ಮಂಜುನಾಥ ಶೆಟ್ಟಿ ಅವರಿಂದ ಅಧಿಕಾರ ಸ್ವೀಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News