ಕಟ್ಟಡದ ಮೆಟ್ಟಿಲಿನಿಂದ ಜಾರಿ ಬಿದ್ದು ಯುವಕ ಮೃತ್ಯು

Update: 2018-12-29 17:36 GMT

ಮಂಗಳೂರು, ಡಿ.29: ನಗರದ ಬರ್ಕೆ ಜಂಕ್ಷನ್ ಬಳಿ ಮನೆಯೊಂದರ ಕಾಮಗಾರಿ ನಡೆಯುತ್ತಿದ್ದ ವೇಳೆ ಕಟ್ಟಡದ ಮಹಡಿಯ ಮೆಟ್ಟಿಲಿನಿಂದ ಜಾರಿ ಬಿದ್ದು ಗಾಯಗೊಂಡ ಯುವಕ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ.

ಉಳ್ಳಾಲ ಬಟ್ಟಿಕೊಟ್ಯ ನಿವಾಸಿ ಅಕ್ಷಯ್ (23) ಮೃತಪಟ್ಟವರು.

ಅವರು ವೆಲ್ಡಿಂಗ್ ಕೆಲಸ ಮಾಡುತ್ತಿದ್ದು, ಡಿ. 26ರಂದು ಮನೆಯೊಂದರ ಕೆಲಸ ಮಾಡುತ್ತಿದ್ದಾಗ ಮಹಡಿಯ ಮೆಟ್ಟಿಲಿನ ಮೂಲಕ ಮೊದಲ ಮಹಡಿಗೆ ಹೋಗುತ್ತಿದ್ದಾಗ ಕಾಲು ಜಾರಿ ಬಿದ್ದು ಪ್ರಜ್ಞೆ ತಪ್ಪಿದ್ದರು. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆ. 

ಈ ಕುರಿತು ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News