ನೀರಿನಲ್ಲಿ ಮುಳುಗಿ ಯುವಕ ಸಾವು

Update: 2018-12-31 16:21 GMT

ಬ್ರಹ್ಮಾವರ, ಡಿ.31: ನಾಯಿ ತೊಳೆಯಲು ಹೊಳೆಗೆ ಇಳಿದ ಯುವಕ ಕಾಲು ಜಾರಿ ಹೊಳೆಯ ನೀರಿಗೆ ಬಿದ್ದು ಮುಳುಗಿ ಮೃತಪಟ್ಟ ಘಟನೆ ರವಿವಾರ ಅಪರಾಹ್ನ ನೀಲಾವರ ಗ್ರಾಮದ ನಂದನಕುದ್ರುವಿನಲ್ಲಿ ಸಂಭವಿಸಿದೆ.

ಮೃತರನ್ನು ನಂದನಕುದ್ರು ರೋಹಿಣಿ ನಿಲಯದ ರವಿಪ್ರಕಾಶ್ (31) ಎಂದು ಗುರುತಿಸಲಾಗಿದೆ.

ರವಿಪ್ರಕಾಶ್ ರವಿವಾರ ಮನೆಯ ಸಮೀಪದ ರಾಮನಕುದ್ರು ಹೊಳೆಯಲ್ಲಿ ನಾಯಿಯನ್ನು ತೊಳೆಯಲು ಕೊಂಡೊಯ್ದಿದ್ದರು. ಆ ವೇಳೆ ಕೆಸರಿನಲ್ಲಿ ಕಾಲು ಜಾರಿ ಹೊಳೆ ನೀರಿಗೆ ಅಕಸ್ಮಿಕವಾಗಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟರೆಂದು ಹೇಳಲಾಗಿದೆ.

ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News