ಸಾಮಾಜಿಕ ಜಾಲತಾಣದಲ್ಲಿ ತೇಜೋವಧೆ: ದ.ಕ. ಯುವ ಕಾಂಗ್ರೆಸ್ ಉಪಾಧ್ಯಕ್ಷರಿಂದ ದೂರು
Update: 2019-01-02 08:58 GMT
ಬಂಟ್ವಾಳ, ಜ.2: ಸಾಮಾಜಿಕ ಜಾಲತಾಣಗಳಲ್ಲಿ ತನ್ನ ವಿರುದ್ಧ ಸುಳ್ಳು ಸಂದೇಶವನ್ನು ಹರಿಯಬಿಟ್ಟು ತೇಜೋವಧೆ ಮಾಡಿರುವ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ದ.ಕ. ಜಿಲ್ಲಾ ಯುವ ಕಾಂಗ್ರೆಸ್ನ ಉಪಾಧ್ಯಕ್ಷ ಲುಕ್ಮಾನ್ ಬಂಟ್ವಾಳ ಅವರು ಬುಧವಾರ ಮಂಗಳೂರು ಸೈಬರ್ ಕ್ರೈಂಗೆ ದೂರು ನೀಡಿದ್ದಾರೆ.
ತಾನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಹಾಗೂ ಬಂಟ್ವಾಳ ಪುರಸಬಾ ಸದಸ್ಯನಾಗಿದ್ದೇನೆ. ಎರಡು ದಿನಗಳ ಹಿಂದೆ ನಕಲು ಮರಳು ಪರ್ಮಿಟ್ ಸಿದ್ಧಪಡಿಸಿಕೊಡುವ ದಂಧೆಗೆ ಸಂಬಂಧಿಸಿ ತನ್ನನ್ನು ಬಂಧಿಸಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಫೋಟೊ ಸಹಿತ ಸುಳ್ಳು ಸಂದೇಶವನ್ನು ಹರಡಲಾಗಿಾದೆ. ಇದರಿಂದ ತನ್ನ ಘನತೆಗೆ ಧಕ್ಕೆಯಾಗಿದ್ದು, ಈ ಸಂದೇಶ ಕಳುಹಿಸಿದ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಲುಕ್ಮಾನ್ ದೂರಿನಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ದಲ್ಲಿ ಇಂಟೆಕ್ನ ಚಿತ್ತರಂಜನ್ ಶೆಟ್ಟಿ, ಸಂಶೀರ್, ಮನ್ಸೂರ್ ಕುದ್ರೋಳಿ, ಅಝರ್, ಇಮ್ರಾನ್ ಉಪಸ್ಥಿತರಿದ್ದರು