ಶಬರಿಮಲೆ ವಿವಾದ: ಗುರುವಾರ ಕೇರಳ ಬಂದ್‌ಗೆ ಕರೆ

Update: 2019-01-02 16:12 GMT

ಶಬರಿಮಲೆ, ಜ. 2: ಋತುಚಕ್ರ ವಯಸ್ಸಿನ ಇಬ್ಬರು ಮಹಿಳೆಯರು ಶಬರಿಮಲೆ ಅಯ್ಯಪ್ಪ ದೇವಾಲಯ ಪ್ರವೇಶಿಸಿದ ಹಿನ್ನೆಲೆಯಲ್ಲಿ ಶಬರಿಮಲೆ ಕರ್ಮ ಸಮಿತಿ ಗುರುವಾರ ಬೆಳಗ್ಗಿನಿಂದ ಸಂಜೆ ವರೆಗೆ ಹರತಾಳಕ್ಕೆ ಕರೆ ನೀಡಿದೆ. ಈ ಬಂದ್‌ಗೆ ಬೆಂಬಲ ನೀಡುವುದಾಗಿ ಹಾಗೂ ರಾಜ್ಯದಲ್ಲಿ ಎರಡು ದಿನಗಳ ಬಂದ್ ನಡೆಸುವುದಾಗಿ ಬಿಜೆಪಿ ಹೇಳಿದೆ.

ಅನಂತ್ರಾಸ್ತ್ರ ಹಿಂದೂ ಪರಿಷದ್ ಕೂಡ ಗುರುವಾರ ಹರತಾಳ ಘೋಷಿಸಿದೆ. ಇನ್ನು ಮುಂದೆ ಬಂದ್‌ಗೆ ಕರೆ ನೀಡುವುದಿಲ್ಲ ಎಂದು 64 ಸಂಘಟನೆಗಳು ಒಮ್ಮತದ ತೀರ್ಮಾನ ತೆಗೆದುಕೊಂಡ ಬಳಿಕ ಘೋಷಣೆಯಾಗುತ್ತಿರುವ ಮೊದಲ ಸಾರ್ವತ್ರಿಕ ಬಂದ್ ಇದಾಗಿದೆ. ವಯನಾಡ್ ಚೇಂಬರ್ ಆಫ್ ಕಾಮರ್ಸ್ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News