ಮದ್ದಳೆ ಮಾಂತ್ರಿಕ ಹಿರಿಯಡಕ ಗೋಪಾಲ್ ರಾವ್‌ಗೆ ಅಭಿನಂದನೆ

Update: 2019-01-02 16:44 GMT

ಹಿರಿಯಡ್ಕ, ಜ.2: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದ ಹಿರಿಯಡಕ ಗೋಪಾಲ್ ರಾವ್ ಅವರಿಗೆ ಭಾರತೀಯ ಅಂಚೆ ಇಲಾಖೆ ಉಡುಪಿ ವಿಭಾಗದ ವತಿಯಿಂದ ಅವರ ಸ್ವಗೃಹದಲ್ಲಿ ಇಂದು ಅಭಿನಂದಿಸಲಾಯಿತು.

ಉಡುಪಿ ವಿಭಾಗದ ಅಂಚೆ ಅಧೀಕ್ಷಕ ರಾಜಶೇಖರ್ ಭಟ್, ಗೋಪಾಲ್ ರಾವ್ ಅವರ ಭಾವಚಿತ್ರವಿರುವ ಮೈಸ್ಟಾಂಪ್ ಅಂಚೆ ಚೀಟಿಯನ್ನು ಸ್ಮರಣಿಕೆ ರೂಪದಲ್ಲಿ ನೀಡಿ ಗೌರವಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ದಕ್ಷಿಣ ಅಂಚೆ ಉಪವಿಭಾಗದ ಸಹಾಯಕ ಅಧೀಕ್ಷಕ ಶ್ರೀನಾಥ್ ಎನ್.ಬಿ., ಉತ್ತರ ಅಂಚೆ ಉಪವಿಭಾಗದ ಸಹಾಯಕ ಅಧೀಕ್ಷಕ ವಸಂತ್, ಅಂಚೆ ಮಾರುಕಟ್ಟೆ ಅಧಿಕಾರಿ ಪ್ರಭಾಕರ್ ಭಟ್, ಹಿರಿಯಡಕ ಅಂಚೆ ಪಾಲಕ ವಿಶ್ವನಾಥ್ ನಾಯಕ್, ಯಕ್ಷಗಾನ ಕಲಾವಿದ ರಾಮಮೂರ್ತಿ ರಾವ್, ಸಿತಾಲಕ್ಷ್ಮೀ ಆರ್.ರಾವ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News