×
Ad

ಬಂಟ್ವಾಳ: ಕೇರಳ ಸರಕಾರಿ ಬಸ್ ಗೆ ಕಲ್ಲು ತೂರಾಟ

Update: 2019-01-02 23:17 IST

ಬಂಟ್ವಾಳ, ಜ. 2: ಬೈಕ್ ನಲ್ಲಿ ಬಂದ ಅಪರಿಚಿತರು ಕೇರಳ ಸರಕಾರಿ ಬಸ್ ಗೆ ಕಲ್ಲು ಹೊಡೆದು ಪರಾರಿಯಾದ ಘಟನೆ ಕೇಪು ಕಲ್ಲಂಗಳ ಆಶ್ರಮ ಶಾಲೆಯ ಸಮೀಪ ಬುಧವಾರ ನಡೆದಿದೆ.

ಪುತ್ತೂರು - ಕಾಸರಗೋಡು ಸಂಚರಿಸುವ ಬಸ್ ವಿಟ್ಲ ಕಡೆಯಿಂದ ಪೆರ್ಲ ಕಡೆಗೆ ಹೋಗುವಾಗ ಈ ಘಟನೆ ನಡೆದಿದೆ. ಕೇಪು ದ್ವಾರದಿಂದ ಬಸ್ ಅನ್ನು  ಹಿಂದಿಕ್ಕಿದ ಬೈಕ್, ಆಶ್ರಮ ಶಾಲೆಯ ಸಮೀಪ ಏಕಾಏಕಿ ಬಸ್ ನ ಮೇಲೆ ಕಲ್ಲು ತೂರಿ ಬೈಕ್ ನಲ್ಲಿ  ಪರಾರಿಯಾಗಿದ್ದಾರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಬೈಕ್ ಗೆ ಬದಿಕೊಡವ  ವಿಚಾರದಲ್ಲಿ ಕಲ್ಲು ತೂರಾಟ  ಮಾಡಲಾಗಿದೆ ಎಂದು ಪ್ರಯಾಣಿಕರು ತಿಳಿಸಿದ್ದಾರೆ.

ಘಟನೆಯ ಬಗ್ಗೆ ವಿಟ್ಲ ಠಾಣೆಗೆ ದೂರು ನೀಡಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News