ಉಪ್ಪಿನಂಗಡಿ: ಜ. 4ರಂದು ಯುನಿವೆಫ್ ನಿಂದ ಸೀರತ್ ಸಮಾವೇಶ

Update: 2019-01-03 13:54 GMT

ಉಪ್ಪಿನಂಗಡಿ, ಜ. 3: ಯುನಿವೆಫ್ ಕರ್ನಾಟಕ ನ.30 ರಿಂದ ಫೆ. 1 ರ ವರೆಗೆ 'ಮಾನವ ಸಮಾಜ ಮತ್ತು ಆದ್ಯಾತ್ಮಿಕತೆ - ಪ್ರವಾದಿ (ಸ) ರ ದೃಷ್ಟಿಯಲ್ಲಿ' ಎಂಬ ವಿಷಯದಲ್ಲಿ ಹಮ್ಮಿಕೊಂಡಿರುವ ಅರಿಯಿರಿ ಮನುಕುಲದ ಪ್ರವಾದಿಯನ್ನು ಅಭಿಯಾನದ ಪ್ರಯುಕ್ತ ಜ.4ರಂದು ಸಂಜೆ 7 ಗಂಟೆಗೆ ಉಪ್ಪಿನಂಗಡಿ ಎಚ್. ಎಂ. ಹಾಲ್ ವಠಾರದಲ್ಲಿ ಸೀರತ್ ಸಮಾವೇಶ ನಡೆಯಲಿದೆ.

ಪ್ರವಾದಿಯ ಶಾಂತಿಯ ಮತ್ತು ಕ್ರಾಂತಿಯ ಸಂದೇಶವು ಇಂದಿಗೂ ಪ್ರಸ್ತುತ ಮತ್ತು ಅಗತ್ಯವಾಗಿದೆ ಅದನ್ನು ಜಿಲ್ಲಾದ್ಯಂತ ಪಸರಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. "ವರ್ತಮಾನದ ಮುಸ್ಲಿಂ ಸಮುದಾಯ ಮತ್ತು ಪ್ರವಾದಿ ಮುಹಮ್ಮದ್ ( ಸ)" ಎಂಬ ವಿಷಯದಲ್ಲಿ ಯುನಿವೆಫ್ ಕರ್ನಾಟಕ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಭಾಷಣ ಮಾಡಲಿದ್ದಾರೆ. ಉಪ್ಪಿನಂಗಡಿಯ ಮಾಲಿಕುದ್ದೀನಾರ್ ಮಸೀದಿ ಅಧ್ಯಕ್ಷ ಮುಸ್ತಫಾ ಕೆಂಪಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು ಎಂದು ಸಂಘಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News