ಶ್ರೀ ರಾಮ ಕೇವಲ ಹಿಂದೂಗಳಿಗೆ ಮಾತ್ರ ಸೇರಿದವನಲ್ಲ, ಜಗತ್ತಿಗೆ ಸೇರಿದವನು: ಫಾರೂಕ್ ಅಬ್ದುಲ್ಲಾ

Update: 2019-01-04 13:52 GMT

ಹೊಸದಿಲ್ಲಿ, ಜ.4: ಶ್ರೀ ರಾಮ ಕೇವಲ ಹಿಂದೂಗಳಿಗೆ ಮಾತ್ರ ಸೇರಿದವನಲ್ಲ ಬದಲಾಗಿ ಇಡೀ ಜಗತ್ತಿಗೆ ಸೇರಿದವನು ಎಂದು ಹೇಳಿರುವ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅದೇ ಸಮಯ ಅಯೋಧ್ಯೆ ವಿವಾದವನ್ನು ಮಾತುಕತೆಗಳ ಮೂಲಕ ಬಗೆಹರಿಸಬೇಕೆಂದು ಹೇಳಿದರು.

ಅಯೋಧ್ಯೆ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಜನವರಿ 10ಕ್ಕೆ ಮುಂದೂಡಿದ ಕೆಲವೇ ಗಂಟೆಗಳಲ್ಲಿ ಅವರ ಮೇಲಿನ ಹೇಳಿಕೆ ಬಂದಿದೆ.

“ಈ ವಿವಾದವನ್ನು ಚರ್ಚಿಸಿ ಬಗೆಹರಿಸಬೇಕಿದೆ. ಅದನ್ನೇಕೆ ನ್ಯಾಯಾಲಯಕ್ಕೆ ಎಳೆದು ತರಬೇಕು?, ಅದನ್ನು ಮಾತುಕತೆ ಮೂಲಕ ಬಗೆಹರಿಸಬಹುದೆಂದು ನಾನು ನಿಶ್ಚಿತವಾಗಿ ಹೇಳಬಲ್ಲೆ” ಎಂದು ಅಬ್ದುಲ್ಲಾ ಹೇಳಿದರು

“ಯಾರು ಕೂಡಾ ಶ್ರೀ ರಾಮನ ವಿರುದ್ಧವಾಗಿಲ್ಲ, ಯಾರೂ ವಿರುದ್ಧವಾಗಿರಲೂ ಬಾರದು. ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಬೇಕಿದೆ. ಈ ವಿವಾದ ಪರಿಹರಿಸಿದ ದಿನದಂದೇ ನಾನು ಅಲ್ಲಿ ಇಟ್ಟಿಗೆ ಕಟ್ಟಲು ಹೋಗುತ್ತೇನೆ ಆದಷ್ಟು ಬೇಗ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಬೇಕಿದೆ” ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News