ಮಂಜನಾಡಿ ಉರೂಸ್‍ಗೆ ಚಾಲನೆ

Update: 2019-01-04 18:18 GMT

ಕೊಣಾಜೆ, ಜ. 4: ಹಝ್ರತ್ ಅಸ್ಸಯಿದ್ ಇಸ್ಮಾಯಿಲ್ ವಲಿಯುಲ್ಲಾಹಿಲ್ ಬುಖಾರಿರವರ ಹೆಸರಿನಲ್ಲಿ ಎರಡು ವರ್ಷಕ್ಕೊಮ್ಮೆ ನಡೆಯುವ ಮಂಜನಾಡಿ ಉರೂಸ್ ಜ.10ರಿಂದ 19ರ ತನಕ ನಡೆಯಲಿದ್ದು, ಶುಕ್ರವಾರ ಮಂಜನಾಡಿ ಜಮಾಅತ್ ಗೌರವಾಧ್ಯಕ್ಷ ಅಸ್ಸಯಿದ್ ಕೆ.ಎಸ್.ಆಟಕೋಯ ತಂಙಳ್ ಕುಂಬೋಳ್ ದ್ವಜಾರೋಹಣಗೈದು ಮಂಜನಾಡಿ ಉರೂಸ್‍ಗೆ ಚಾಲನೆ ನೀಡಿದರು.

ದರ್ಗಾ ಸಮಿತಿ ಅಧ್ಯಕ್ಷ ಅಬ್ದುಲ್ ಅಝೀಝ್ ಮೈಸೂರು ಬಾವ, ಮುದರ್ರಿಸ್ ಪಿ.ಎ.ಅಹ್ಮದ್ ಬಾಖವಿ, ಪ್ರಧಾನ ಕಾರ್ಯದರ್ಶಿ ಅಝೀಝ್ ಪರ್ತಿಪ್ಪಾಡಿ, ಉಪಾಧ್ಯಕ್ಷರಾದ ಇಸ್ಮಾಯಿಲ್ ದೊಡ್ಡಮನೆ, ಮೊಯ್ದಿನ್ ಕುಂಞಿ ಬಸರ, ಕೊಶಾಧಿಕಾರಿ ಕುಂಞಿ ಬಾವ ಹಾಜಿ ಕಲ್ಕಟ್ಟ, ಜೊತೆ ಕಾರ್ಯದರ್ಶಿ ಎನ್.ಕೆ.ಬಾವು ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News