ಜ.8ರಿಂದ ಕೇಂದ್ರ ಸರಕಾರದ ವಿರುದ್ಧದ ಸಾರ್ವತ್ರಿಕ ಮುಷ್ಕರಕ್ಕೆ ಪಿಂಚಣಿದಾರರ ಸಂಘ ಬೆಂಬಲ
Update: 2019-01-05 22:14 IST
ಉಡುಪಿ, ಜ .5: ಕೇಂದ್ರ ಸರಕಾರದ ಜನವಿರೋಧಿ ಹಾಗೂ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ಜ.8 ಮತ್ತು 9ರಂದು ದೇಶಾದ್ಯಂತ ನಡೆಯುವ ಎರಡು ದಿನಗಳ ಸಾರ್ವತ್ರಿಕ ಮುಷ್ಕರವನ್ನು ಬೆಂಬಲಿಸಿ ಪಿಂಚಣಿದಾರರ ಸಂಘ ಭಾಗವಹಿಸುತ್ತದೆ ಹಾಗೂ ಪಿಂಚಣಿದಾರರಿಗೆ ಮಾಸಿಕ ಪಿಂಚಣಿ 6000ರೂ. ಹಾಗೂ ಇದಕ್ಕೆ ತುಟ್ಟಿಭತ್ಯೆಯನ್ನು ಸೇರಿಸಬೇಕೆಂದು ಒತ್ತಾಯಿಸುತ್ತದೆ ಎಂದು ಪಿಂಚಣಿದಾರರ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.