ಮೇವಿನ ಕೊರತೆ: ಉತ್ತರ ಪ್ರದೇಶದಲ್ಲಿ 4 ದನ,3 ಕರು ಸಾವು

Update: 2019-01-07 15:42 GMT
ಸಾಂದರ್ಭಿಕ ಚಿತ್ರ

ಬಂದ(ಉ.ಪ್ರ),ಜ.7: ಮೇವಿನ ಕೊರತೆಯಿಂದ ಉತ್ತರ ಪ್ರದೇಶದ ಬಂದ ಜಿಲ್ಲೆಯಲ್ಲಿ ನಾಲ್ಕು ದನಗಳು ಮತ್ತು ಮೂರು ಕರುಗಳು ಸಾವನ್ನಪ್ಪಿವೆ ಎಂದು ಸ್ಥಳೀಯ ಮಾಧ್ಯಮಗಳು ಸೋಮವಾರ ವರದಿ ಮಾಡಿವೆ. ಬಂದ ಜಿಲ್ಲೆಯ ಸದರ್ ಪ್ರದೇಶದಲ್ಲಿರುವ ಗುರೆಹ್ ಗ್ರಾಮದಲ್ಲಿ ರವಿವಾರ ಈ ಘಟನೆ ನಡೆದಿರುವುದಾಗಿ ವರದಿ ತಿಳಿಸಿದೆ.

ಸುಮಾರು 150 ಜಾನುವಾರುಗಳನ್ನು ಗ್ರಾಮಸ್ಥರು ಆವರಣವೊಂದರಲ್ಲಿ ಕಟ್ಟಿ ಹಾಕಿದ್ದರು. ಈ ಪೈಕಿ ಏಳು ಜಾನುವಾರುಗಳು ಮೇವಿನ ಕೊರತೆಯಿಂದ ಮೃತಪಟ್ಟಿವೆ ಎಂದು ಗ್ರಾಮ ಮುಖ್ಯಸ್ಥರು ತಿಳಿಸಿದ್ದಾರೆ.

ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸದರ್‌ನ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಟಿ. ಅನ್ಸಾರಿಯ, ಜಾನುವಾರುಗಳ ಸಾವಿನ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಗ್ರಾಮಕ್ಕೆ ತಂಡವನ್ನು ಕಳುಹಿಸಿ ಮೇವು ಸರಿಯಾಗಿ ದೊರೆಯುತ್ತಿದೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News