ಮುಲ್ಕಿ ಪಯ್ಯೋಟ್ಟು ರತ್ನಾಕರ ಸಾಲ್ಯಾನ್ ನಿಧನ

Update: 2019-01-08 08:06 GMT

ಮುಲ್ಕಿ, ಜ. 8: ಕಂಬಳ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ "ಮುಲ್ಕಿ ಪಯ್ಯೋಟ್ಟು" ಮನೆತನದ ಪ್ರಸ್ತುತ ಸುರತ್ಕಲ್‌ ನಿವಾಸಿ ರತ್ನಾಕರ ಸಾಲ್ಯಾನ್ ಪಯ್ಯೋಟ್ಟು (75) ಹೃದಯಾಘಾತದಿಂದ ಮಂಗಳವಾರ ಬೆಳಗ್ಗೆ ನಿಧನರಾದರು.

ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಮುಂಬೈ ಸಮಿತಿಯ ಪ್ರತಿನಿಧಿಯಾಗಿದ್ದರು. ಸಮಾಜದ ಎಲ್ಲಾ ವರ್ಗದವರೊಂದಿಗೆ ಪ್ರೀತಿ ಪಾತ್ರರಾಗಿ, ಜನಾನುರಾಗಿದ್ದರು.

ಇಂದು ಸಂಜೆ ಅಂತಿಮ ದರ್ಶನ

ರತ್ನಾಕರ ಸಾಲ್ಯಾನ್ ಅವರ ಪಾರ್ಥಿವ ಶರೀರವನ್ನು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಇಂದು ಸಂಜೆ 6 ಗಂಟೆಗೆ ಮುಲ್ಕಿ ಪಯ್ಯೋಟ್ಟುವಿನಲ್ಲಿ  ಅಂತ್ಯ ಸಂಸ್ಕಾರ ನೇರವೇರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News